spot_img
Wednesday, February 19, 2025
spot_img

ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರ : 78ನೇ ಸ್ವಾತಂತ್ರ್ಯೋತ್ಸವ

ಜನಪ್ರತಿನಿಧಿ (ಕುಂದಾಪುರ (ಆಗಷ್ಟ್ ೧೫): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ
ಘಟಕದಲ್ಲಿ ಆಯೋಜಿಸಿದ ೭೮ನೇ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣವನ್ನು ಬಿ. ಎನ್. ಶೆಟ್ಟಿ,
ಹೆಚ್ಚುವರಿ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ನೆರವೇರಿಸಿದರು.

ಧ್ವಜಾರೋಹಣವನ್ನು ನೆರವೇರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣದಿಂದ ರಾಷ್ಟ್ರ ಪ್ರೇಮವನ್ನು ಬೆಳೆಸುವ ಮೂಲಕ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಗವರ್ನಿಗ್ ಕೌನ್ಸಿಲ್ ಸದಸ್ಯರಾದ ಎನ್. ನಾರಾಯಣ್ ನಾಯಕ್,
ಪ್ರಾಂಶುಪಾಲರಾದ ಪ್ರೊ|ಕೆ. ಉಮೇಶ್ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ
ಕೋವಾಡಿ , ಎನ್‌ಸಿಸಿ ಕೇರ್ ಟೇಕರ್ ಶರತ್ ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿಗಳು,
ಎನ್‌ಸಿಸಿ, ಎನ್ಎಸ್ಎಸ್, ರೇಂಜರ್ಸ್ ಮತ್ತು ರೋವರ್ಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಪ್ರಾಧ್ಯಪಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಎನ್‌ಸಿಸಿ ಕ್ಯಾಡೆಟ್
ಸುಪ್ರೀತ್ ಕಮಾಂಡ್ ನೀಡಿ, ಪ್ರಖ್ಯಾತ ಮತ್ತು ಪ್ರವೀಣ್, ವಘ ಬಾರ್ಡರ್ ಪರೇಡ್ ಪ್ರಾತ್ಯಕ್ಷತೆ
ತೋರಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!