spot_img
Friday, January 30, 2026
spot_img

ಕುಂದಾಪುರ: ‘ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕಿಯರ ಸಬಲೀಕರಣ’ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ವತಿಯಿಂದ ಗ್ರಾಮ ಪಂಚಾಯತ್ ಮಹಿಳಾ ಅಧ್ಯಕ್ಷರುಗಳಿಗೆ “ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕಿಯರ ಸಬಲೀಕರಣ” ಎನ್ನುವ ಕುರಿತು ಕಾರ್ಯಕ್ರಮ ನಡೆಯಿತು.

ತರಬೇತಿ ಅನುಷ್ಟಾನ ಮಾರ್ಗಸೂಚಿಯಂತೆ ಕುಂದಾಪುರ ಬೈಂದೂರು ಮತ್ತು ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಒಗ್ಗೂಡಿಸಿ ಸಂಸ್ಥೆಯವರು ನಿಗದಿಪಡಿಸಿದಂತೆ ಸೆ.17ರಿಂದ ಸೆ.19 ರ ವರೆಗೆ ನಡೆಯುವ ತರಬೇತಿ ಕುಂದಾಪುರ ತಾಲೂಕು ಪಂಚಾಯತ್ ಸಾಮರ್ಥ್ಯಸೌಧದಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೆರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ದೀಪ, ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಮೋಹನ್ ಚಂದ್ರ ಕಾಳಾವರ್ಕರ್, ಹಾಗೂ ತರಬೇತುದಾರರ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿ ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಆಚಾರ್ಯ, ಬೈಂದೂರು ತಾಲೂಕು ಪಂಚಾಯತ್ ಎ.ಒ ಪೂರ್ಣಿಮಾ, ಬಿಜೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ, ಪ್ರಮೀಳಾ ಜೆ ಶೆಟ್ಟಿ ಇ.ಸಿ.ಒ ಸಿಡಿಪಿ‌ಒ ಕಛೇರಿ ಬ್ರಹ್ಮಾವರ, ಹೆಮ್ಮಾಡಿ ಪಂಚಾಯತ್ ಕಾರ್ಯದರ್ಶಿ ಜಯಮ್ಮ, ಡಿಟಿಸಿ ಬೈಂದೂರು ಸುನೀತ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!