spot_img
Monday, June 23, 2025
spot_img

ಆರ್ಯ ಸತೀಶ್ ಹೆಮ್ಮಾಡಿ ಅವರಿಂದ ಜಾದೂ ಪ್ರದರ್ಶನ

ಕುಂದಾಪುರ:ಪ್ರಸಿದ್ದ ಜಾದೂಗಾರರಾದ ಸತೀಶ್ ಹೆಮ್ಮಾಡಿ ಅವರ ಪುತ್ರ 8ನೇ ತರಗತಿ ವಿದ್ಯಾರ್ಥಿ ಆರ್ಯ, ಹವ್ಯಾಸಕ್ಕಾಗಿ ಜಾದೂ ವಿದ್ಯೆ ಕಲಿತು ನೀಲಾವರದ ಶ್ರೀ ಮಹಿಷಾಮರ್ದಿನಿ ದೇವಸ್ಥಾನದಲ್ಲಿ ಪ್ರಥಮ ಜಾದೂ ಪ್ರದರ್ಶನ ನೀಡಿದರು.

ತಂದೆಯೊಂದಿಗೆ ಜಾದೂ ಪ್ರದರ್ಶನ ನೀಡುತ್ತಿರುವ ಆರ್ಯ ಇಲ್ಲಿ ಸ್ವತಂತ್ರವಾಗಿ ಜಾದೂ ಪ್ರದರ್ಶನ ನೀಡುವ ಮೂಲಕ ಗಮನ ಸಳೆದಿದ್ದಾರೆ. ಪುಟ್ಟ ಪ್ರಾಯದಲ್ಲಿಯೇ ಜಾದೂ ವಿದ್ಯೆಯನ್ನು ಅತ್ಯಂತ ಶ್ರದ್ದೆಯಿಂದ ಅಧ್ಯಯನ ಮಾಡಿ ವೇದಿಕೆಯಲ್ಲಿ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.

ಸತೀಶ್ ಹೆಮ್ಮಾಡಿ ಅವರು ಸಣ್ಣ ಪ್ರಾಯದಿಂದಲೇ ಜಾದೂ ಕಲಿತು ಅಂತರಾಷ್ಟ್ರೀಯ ಮಟ್ಟದಲಿ ಹೆಸರು ಮಾಡಿದ ಜಾದೂಗಾರರು. ಇದೀಗ ಅವರ ಪುತ್ರ ತಂದೆಯಂತೆ ದೊಡ್ಡ ಜಾದೂಗಾರನಾಗುವ ಸೂಚನೆ ನೀಡಿದ್ದಾನೆ.

ಆರ್ಯ ಪ್ರಸ್ತುತ ಹಟ್ಟಿಯಂಗಡಿಯ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!