Tuesday, October 22, 2024

ಕ್ರೀಡೆಗೆ ಪ್ರೋತ್ಸಾಹ ದೊರಕಲಿ-ಚಿತ್ರನಟ ಪ್ರಮೋದ್ ಶೆಟ್ಟಿ

ಗಂಗೊಳ್ಳಿ: ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಕಿರಿಯರ ಶಟಲ್ ಟೂರ್ನಮೆಂಟ್ ಸಮಾರೋಪ ಸಮಾರಂಭಕ್ಕೆ ಚಿತ್ರನಟ  ಪ್ರಮೋದ್ ಶೆಟ್ಟಿ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ರಾಘವೇಂದ್ರ ಸ್ಪೊರ್ಟ್ಸ್ ಕ್ಲಬ್ ತನ್ನ ಸುವರ್ಣ ಮಹೋತ್ಸವ ಆಚರಿಸುವ ಹೊಸ್ತಿಲಲ್ಲಿರುವಾಗ ಸಂಸ್ಥೆಯಿಂದ ಇನ್ನಷ್ಟು ಕ್ರೀಡಾಕೂಟಗಳು ಆಯೋಜಿಸಿ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ನೀಡಲಿ ಎಂದು ಶುಭ ಹಾರೈಸಿದರು.

ಕ್ರೀಡಾಕೂಟವನ್ನು ಡಾ. ಪ್ರಮೀಳಾ ನಾಯಕ್ ಕುಂದಾಪುರ ಮತ್ತು ಡಾ. ಭಾಸ್ಕರ ಶೆಟ್ಟಿ ಉಡುಪಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಎಚ್ ಗಣೇಶ್ ಕಾಮತ್, ಯು ಸುರೇಶ್ ಪೈ, ಸಂತೋಷ್ ಕಾಮತ್ ಆರ್ಡಿ, ಕೃಷ್ಣ ಪೈ ಸಿದ್ಧಾಪುರ, ವಾಮನ್ ಎಸ್ ಪೈ, ಶ್ರೀ ಕೋಟ ಶ್ರೀನಿವಾಸ ನಾಯಕ್ ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷ ಜಿ ವೆಂಕಟೇಶ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಕೋಟ ಹರೀಶ್ ನಾಯಕ್ ವಂದಿಸಿದರು. ಕೋಟ ಪರಮೇಶ್ವರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!