spot_img
Saturday, April 26, 2025
spot_img

ಜೆಸಿ‌ಐ ಕುಂದಾಪುರ ಸಿಟಿ: ಜೇಸಿ ಸಪ್ತಾಹ ಉದ್ಘಾಟನೆ

ಜೆಸಿ‌ಐ ಕುಂದಾಪುರ ಸಿಟಿ: ಜೇಸಿ ಸಪ್ತಾಹ ಉದ್ಘಾಟನೆ

ಕುಂದಾಪುರ: ಜೆಸಿ‌ಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಆಯೋಜಿಸಲಾಗಿರುವ ಜೇಸಿ ಸಪ್ತಾಹವನ್ನು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಉದ್ಘಾಟಿಸಿದರು.
ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಜೆಸಿ‌ಐ ಕುಂದಾಪುರ ಸಿಟಿಯ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ವಹಿಸಿದ್ದರು.
ವ್ಯವಹಾರ ವಿಭಾಗದಲ್ಲಿ ಸಾಧನೆಗೈದ ಲಿಯಾಖತ್ ಇವರಿಗೆ ಬಿಸಿನೆಸ್ ಐಕಾನ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕಿ ಡಾ.ಸರೋಜ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮೋಹನ್ ಶೆಣೈ, ರಾಷ್ಟ್ರೀಯ ಉಪಾಧ್ಯಕ್ಷರಾದ ಕೆ.ಕಾರ್ತಿಕೇಯ ಮಧ್ಯಸ್ಥ, ಜನತಾ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ, ಗುತ್ತಿಗೆದಾರರಾದ ಕೆ.ಅರ್ ನಾಯ್ಕ್, ಜೆಸಿ‌ಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷರಾದ ಹುಸೇನ್ ಹೈಕಾಡಿ, ನಿಕಟಪೂರ್ವ ಅಧ್ಯಕ್ಷೆ ಡಾ. ಸೋನಿ ಡಿ ಕೋಸ್ಟ, ಸಪ್ತಾಹ ಡಾ. ಸಭಾಪತಿ ರಾಜು ಮೂಡ್ಲಕಟ್ಟೆ, ಕಾರ್ಯದರ್ಶಿ ವಿಜಯ ಭಂಡಾರಿ, ಸಂಚಾಲಕ ನಾಗೇಶ್ ನಾವಡ, ಖಜಾಂಚಿ ಶಶಾಂಕ್ ಪೂಜಾರಿ, ಜೇಸಿರೇಟ್ ರೇಷ್ಮಾ ಕೋಟ್ಯಾನ್, ಯುವ ಜೇಸಿ ಕಿರಣ್, ಕಾರ್ಯಕ್ರಮ ಸಂಯೋಜಕರಾದ ಜಗದೀಶ್ , ಶ್ವೇತಾ, ಅಕ್ಷಯ ಹೆಮ್ಮಾಡಿ, ಇನ್ನಿತರರು ಉಪಸ್ಥಿತರಿದ್ದರು.
ಸುಮ ಹೊಂಬಾಡಿ ಜೇಸಿ ವಾಣಿ ಓದಿದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!