Sunday, September 8, 2024

ಮಂತ್ರಾಲಯದಲ್ಲಿ ಮಾಣಿಕೊಳಲು ಶ್ರೀಲಕ್ಷ್ಮಿ ಚೆನ್ನಕೇಶವ ಮಕ್ಕಳ ಭಜನಾ ಮಂಡಳಿ ಭಜನೆ

ಕುಂದಾಪುರ: ಹಕ್ಲಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮಿ ಚೆನ್ನಕೇಶವ ಮಕ್ಕಳ ಭಜನಾ ಮಂಡಳಿ ಸದಸ್ಯರು ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿ ಬೆಳಿಗ್ಗೆ ಪಲ್ಲಕ್ಕಿ ಉತ್ಸವ ಇದ್ದು ಅದರಲ್ಲಿ ಆಕರ್ಷಣೆ ಯಾಗಿ ಕುಣಿತ ಭಜನಾ ಕಾರ್ಯಕ್ರಮ ನೆಡೆಸಿಕೊಟ್ಟರು.

ಬೆಳಿಗ್ಗೆ ಮಂಚಲಮ್ಮ ತಾಯಿ ದರ್ಶನದ ಬಳಿಕ ನಂತರ ಗುರುರಾಯರ ದರ್ಶನ ಮಾಡಿ ಕುಳಿತು ಭಜನಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಕುಣಿತ ಭಜನಾ ಕಾರ್ಯಕ್ರಮ ನೆಡೆಸಿಕೊಟ್ಟು ನೆರೆದ ಭಕ್ತಾದಿಗಳ ಪ್ರಶಂಸೆಗೆ ಪಾತ್ರರಾದರು.

ಮಕ್ಕಳ ಕುಣಿತ ಭಜನೆ ವೀಕ್ಷಿಸಿದ ಮಂತ್ರಾಲಯದ ಶ್ರೀ ಸುಭುದೇಂದ್ರ ಶ್ರೀಪಾದರು ಸಂತೋಷಗೊಂಡು ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!