spot_img
Saturday, July 19, 2025
spot_img

ಮಾರಣಕಟ್ಟೆ: ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕುಂದಾಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಮನೆಯಲ್ಲಿ ನಡೆದ ಮಾರಣಕಟ್ಟೆ ಎರಡು ಮೇಳಗಳ ಕೂಡಾಟದಲ್ಲಿ ಮಾರಣಕಟ್ಟೆ ಮೇಳದ ಕಲಾವಿದರಾದ ಉಪ್ಪುಂದ ನಾಗೇಂದ್ರ ರಾವ್ ಹಾಗೂ ಉದಯ ಮೆಂಡನ್ ಕೋಟ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಯಕ್ಷಗಾನಕ್ಕೆ ಐದು ನೂರು ವರ್ಷಗಳ ಇತಿಹಾಸವಿದೆ. ರಾತ್ರಿಯಿಂದ ಬೆಳಿಗ್ಗೆಯ ತನಕ ಯಕ್ಷಗಾನವನ್ನು ನೋಡಿ ಆನಂದಿಸುತ್ತೇವೆ. ಯಕ್ಷಗಾನದಂತಹ ಕಲೆಯನ್ನು ಉಳಿಸಿ ಬೆಳೆಸೋಣ, ಕಲಾವಿದರನ್ನು ಗೌರವಿಸೋಣ ಎಂದರು.

ವೇದಿಕೆಯಲ್ಲಿ ಶ್ರೀಧರ ಮಂಜರು, ನಾಗರಾಜ ಮಂಜರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಕೌಟೆಂಟ್ ನಾರಾಯಣ ಶೆಟ್ಟಿ, ಅಮಾಸೆಬೈಲು ಶಂಕರ ಐತಾಳ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!