Sunday, September 8, 2024

ಬಿದ್ಕಲ್‌ಕಟ್ಟೆ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಕುಂದಾಪುರ : ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಬಿ .ಸಿ ಟ್ರಸ್ಟ್ (ರಿ)ಕುಂದಾಪುರ-2 ತಾಲೂಕು ಬಿದ್ಕಲ್‌ಕಟ್ಟೆ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇದರ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಜಿಲ್ಲೆಯ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆಯವರು ಉದ್ಘಾಟಿಸಿ ಸತ್ಯವನ್ನು ಹೇಳುವುದರ ಮೂಲಕ ಸ್ವಾಮಿ ಸತ್ಯನಾರಾಯಣ ಪೂಜೆ ಮಾಡಿ ಸ್ವಾಮಿಯ ಕೃಪೆಗೆ ಪಾತ್ರರಾಗೋಣ. ಹಾಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿ ಎಂದರು.

ಪ್ರವಚನಕಾರರಾದ ಪ್ರೇಮಾನಂದ್ ಶೆಟ್ಟಿಯವರು ಧಾರ್ಮಿಕ ಮಹತ್ವವನ್ನು ತಿಳಿಸಿದರು. ಯೋಜನಾಧಿಕಾರಿ ನಾರಾಯಣ ಪಾಲನ್‌ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಲೇಖ ಎಸ್‌ಶೆಟ್ಟಿ ಜನಜಾಗೃತಿ ವೇದಿಕೆ ಸದಸ್ಯೆ, ನಾಗಲಕ್ಷ್ಮೀ ಸಭಾಭವನದ ಮಾಲೀಕರಾದ ರಾಘವೇಂದ್ರ ಅಡಿಗ, ಯಶೋಧ, ಮಾಜಿ ವಲಯಾಧ್ಯಕ್ಷರಾದ ಪ್ರೇಮ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೂಜಾ ಸಮಿತಿ ಅಧ್ಯಕ್ಷರಾದ ರಮೇಶ್‌ರವರು ಎಲ್ಲರ ಸಹಕಾರವನ್ನು ಶ್ಲಾಘಿಸಿದರು. ವಲಯ ಮೇಲ್ವಿಚಾರಕಿ ಶರ್ಮಿಳಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

112 ಜೋಡಿ ದಂಪತಿಗಳು ಶ್ರೀ ಸತ್ಯನಾರಾಯಣ ಪೂಜೆಯ ಸಂಕಲ್ಪದಲ್ಲಿ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!