Sunday, September 8, 2024

ಸಾಸ್ತಾನ ಶ್ರೀ ಗೋಳಿಗರಡಿ ಮೇಳ: ‘ವರಾಹರೂಪಂ’ ಪ್ರಸಂಗ ಬಿಡುಗಡೆ, ‘ಯಕ್ಷ ಸಾಹಿತ್ಯರತ್ನ ಪ್ರಶಸ್ತಿ’ ಪ್ರದಾನ

ಸಾಸ್ತಾನ: ಶ್ರೀ ಕ್ಷೇತ್ರ ಗೋಳಿಗರಡಿಯ ಶ್ರಿ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನೂತನ ಪ್ರಸಂಗ ಬಿಡುಗಡೆ ಮತ್ತು ಪ್ರಸಂಗಕ್ಕೆ ಪದ್ಯ ರಚನೆ ಮಾಡಿದ ಪಿ.ವಿ.ಆನಂದ ಸಾಲಿಗ್ರಾಮ ಇವರಿಗೆ ಯಕ್ಷ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನ.25ರಂದು ಸಾಸ್ತಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ನಡೆಯಿತು.

ಸುರೇಶ್ ಕುಲಾಲ್ ಹಂದಿಗದ್ದೆ ಅವರು ರಚಿಸಿದ ‘ವರಾಹರೂಪಂ‘ ಯಕ್ಷಗಾನ ಪ್ರಸಂಗವನ್ನು ಗೋಳಿಗರಡಿಯ ಪಾತ್ರಿಗಳಾದ ಶಂಕರ ಪೂಜಾರಿ ಬಿಡುಗಡೆ ಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಅಣಲಾಡಿ ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ ಕಾರಂತ, ಮೇಳದ ವ್ಯವಸ್ಥಾಪನಾ ಸಮಿತಿಯ ಐರೋಡಿ ಗಣಪಯ್ಯ ಆಚಾರ್ಯ, ಮೇಳದ ವ್ಯವಸ್ಥಾಪಕ ಜಿ.ವಿಠಲ ಪೂಜಾರಿ, ಪ್ರಸಂಗಕರ್ತ ಸುರೇಶ್ ಕುಲಾಲ್ ಹಂದಿಗದ್ದೆ ಉಪಸ್ಥಿತರಿದ್ದರು.

ಮೇಳದ ಪ್ರತಿನಿಧಿ ಎ.ಎನ್.ಶಂಕರ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!