Sunday, April 28, 2024

ಕುಂದಾಪುರ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ & ಆರ್ಕಿಟೆಕ್ಟ್ಸ್ ಪದಗ್ರಹಣ

ಕುಂದಾಪುರ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ಸ್ (ರಿ) ಇದರ ಪದಗ್ರಹಣ ಕಾರ್ಯಕ್ರಮ ನ.18 ಶನಿವಾರದಂದು ನಗು ಪ್ಯಾಲೇಸ್‌ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆರ್ಕಿಟೆಕ್ಟ್ ಯೋಗೀಶ್ ಚಂದ್ರಾಧರ್ ಉಡುಪಿ ಪದಗ್ರಹಣ ಅಧಿಕಾರಿಯಾಗಿ ಹಾಗೂ ಉದ್ಯಮಿ ರಾಜೇಂದ್ರ ಕಾಮತ್ ಇವರು ಭಾಗವಹಿಸಿದ್ದರು. ಇಂಜಿನಿಯರ್ ಮಂಜುನಾಥ್ ಎನ್, ಪ್ರವೀಣ ಎನ್. ಸತ್ಯಶಂಕರ್ ಕೆ. ಇವರು ನೂತನ ಅಧ್ಯಕ್ಷ ಆರ್ಕಿಟೆಕ್ಟ್ ಇಕ್ಬಾಲ್ ಪಿ. ಎಂ., ಕಾರ್ಯದರ್ಶಿ ಹರೀಶ್ ಕುಲಾಲ್, ಖಜಾಂಚಿ ವಿನೋದ್ ಬರೆಟ್ಟೊ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.

ಗುರುರಾಜ್ ರಾವ್ ಹಾಗೂ ರವೀಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಹೆಗ್ಡೆ ಪ್ರಾರ್ಥನೆ ನೆರವೇರಿಸಿದರು. ರಾಮಾನಂದ ಕೆ. ಸ್ವಾಗತಿಸಿದರು. ರವೀಂದ್ರ ಕಾವೇರಿ ಸಂಸ್ಥೆಯನ್ನು ಪರಿಚಯಿಸಿದರು. ರಾಮಚಂದ್ರ ಆಚಾರ್ ಹಾಗೂ ಓಂ ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಹರೀಶ್ ಕುಲಾಲ್ ವಂದಿಸಿದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!