Sunday, September 8, 2024

ಮರವಂತೆ: ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ

ಮರವಂತೆ ಸಾಧನಾ ಮುದಾಯ ಭವನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಬಿನ್ನವಾಗಿ ಆಚರಿಸಲಾಯಿತು. ಯುವ ಸಂಗೀತಾಭ್ಯಾಸಿಗಳಾದ ಸೌರಭ್ ಕಿಣಿ ಉಪ್ಪುಂದ, ವಿಶ್ವಜಿತ್ ಕಿಣಿ ಉಪ್ಪುಂದ, ಶ್ರೀವರ್ಷಾ ಮರವಂತೆ, ಧನ್ಯತ್ ಎ. ಖಾರ್ವಿ, ಧನ್ಯತಾ ಶ್ಯಾನುಭಾಗ್, ಕೇದಾರ ಮರವಂತೆ ನಾದ ತರಂಗ ಪ್ರಸ್ತುತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರೇಷ್ಠ ಅಂಕ ಗಳಿಸಿದ ಶಿಫಾನಾ, ಸಾನಿಕಾ ದೇವಾಡಿಗ, ಸೌರಕ್ಷಾ ಖಾರ್ವಿ, ಸಂಜನಾ ದೇವಾಡಿಗ, ರಕ್ಷಿತಾ ಆರ್. ಖಾರ್ವಿ ಅವರನ್ನು ಪುರಸ್ಕರಿಸಲಾಯಿತು. ಸ್ಥಳೀಯ ಘನದ್ರವ ಸಂಪನ್ಮೂಲ ಘಟಕದ ಸ್ವಚ್ಛತಾ ಸೇನಾನಿಗಳಾದ ಸುನೀತಾ, ಸುಜಾತಾ, ಶಶಿಧರ, ಮಾಲತಿ, ಸೀತಾ, ಲಕ್ಷ್ಮೀ, ಮನೋರಮಾ, ನಾಗರತ್ನಾ, ರಕ್ಷಿತಾ, ಪ್ರಶಾಂತ ಅವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ದೇವಿದಾಸ ಶ್ಯಾನುಭಾಗ್ ಸ್ವಾಗತಿಸಿದರು. ಎಂ. ವಿನಾಯಕ ರಾವ್ ವಂದಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು. ಬೆಳಗ್ಗೆ ಅಧ್ಯಕ್ಷ ಚಂದ್ರ ಖಾರ್ವಿ ನೇತೃತ್ವದಲ್ಲಿ ರಾಷ್ಟ್ರಧ್ವಜ ವಂದನೆ ನಡೆದಿತ್ತು. ಕೋಶಾಧಿಕಾರಿ ಶೇಷಗಿರಿ ಆಚಾರ್ಯ, ಸದಸ್ಯರಾದ ಶಂಕರ ಖಾರ್ವಿ, ನಾಗೇಶ ರಾವ್, ಅಣ್ಣಪ್ಪ ಬಿಲ್ಲವ, ಸುಬ್ರಹ್ಮಣ್ಯ ಅವಭೃತ, ಮಂಜು ಪೂಜಾರಿ, ಸೋಮಯ್ಯ ಬಿಲ್ಲವ, ಚಂದ್ರ ಬಿಲ್ಲವ, ಪುಟ್ಟ ಎಂ. ಬಿಲ್ಲವ, ರತ್ನಾಕರ ಬಿಲ್ಲವ, ತಮ್ಮಯ್ಯ ಅಕ್ಸಾಲಿ, ಗುರುದಾಸ ಶ್ಯಾನುಭಾಗ್, ಎಸ್. ಜನಾರ್ದನ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!