Saturday, April 20, 2024

ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದಿಂದ ಅಭಿನಂದನೆ

ಕುಂದಾಪುರ: ಕೋವಿಡ್-19 ಸಾಂಕ್ರಾಮಿಕ ಅವದಿಯಲ್ಲಿ ನೂರು ಕೋಟಿ ಲಸಿಕೆ ನೀಡಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಭಾರತ ಶತಕೋಟಿ ಸಂಭ್ರಮದಲ್ಲಿದೆ. ದೇಶ ಶತಕೋಟಿ ಲಸಿಕಾಕರಣ ಗುರಿ ಸಾಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು. ಈ ಹಿನ್ನೆಲೆಯಲ್ಲಿ ಕುಂಭಾಶಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾ ಹಾಗೂ ಅವರ ತಂಡವನ್ನು ಅವರ ಸೇವೆಯನ್ನು ಗುರುತಿಸಿ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ಹೂ ಕುಂಡಗಳ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಸದಸ್ಯರಾದ ಕಲ್ಷನಾ ಭಾಸ್ಕರ್ ,ಆಶಾಲತಾ ಶೆಟ್ಟಿ,ಚಂದ್ರಿಕಾ ಧನ್ಯ, ಅಮೃತಾ ಬನವಾಲಿಕರ್, ಸುಮಶ್ರೀ ಧನ್ಯ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರಾಜೇಂದ್ರ, ಲ್ಯಾಬ್ ಟೆಕ್ನೀಶನ್ ದಿವ್ಯಾ, ನರ್ಸ್ ಗಿರಿಜಾ, ಆಶಾ ವೈಲೆಟ್ ಬರೆಟ್ಟೋ ಹಾಗೂ ದಿವ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!