Sunday, September 8, 2024

ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ: ಶ್ರೀ ವರಮಹಾಲಕ್ಷ್ಮೀ ಪೂಜೆ, ಸನ್ಮಾನ


ಕುಂದಾಪುರ: ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಒಕ್ಕೂಟದ ಮಿನಿಹಾಲ್‌ನಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಶೋಭಾ ನಾಡಕರ್ಣಿ, ಸಿಂಗಾರಿ ಟೀಚರ್, ಸುಲೋಚನಾ ಭಟ್, ಮನೋರಮ ಶೇಟ್, ಮರಿಯಾ ಡಿಸೋಜಾ, ಚಂದ್ರಶೇಖರ ಹೆಗ್ಡೆ, ಮಂಜುನಾಥ ಕಾಮತ್, ಮಹೇಶ ಶೆಣೈ, ಆಶಾಲತಾ ಶೆಟ್ಟಿ, ಜ್ಯೋತಿ ಚಿಲ್ಡ್ರನ್‌ನ ಲೂಸಿ ಡಿಸೋಜ, ರೀನಾ ಡಿಕೋಸ್ತಾ, ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ, ರೋಟರಿ ಮಿಡ್ ಟೌನ್‌ನ ಸುಧಾಕರ ಶೆಟ್ಟಿ ಆವರ್ಸೆ, ಪಾರ್ವತಿ ಜಿ.ಐತಾಳ್, ಶ್ರೀನಿಧಿ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪ್ರಸೂತಿ ತಜ್ಞರಾದ ಡಾ.ರಂಜಿತ್ ಕುಮಾರ್ ಶೆಟ್ಟಿ, ಮಲ್ಲಿಗೆ ಕೃಷಿಕರಾದ ಪ್ರೇಮಾ ಗಣೇಶ್ ಪೂಜಾರಿ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್.ಆರ್., ಡಾ.ಪದ್ಮನಾಭ ಆಚಾರ್ಯ, ಸಮಾಜ ಸೇವಕಿ ಆರತಿ ಆಜ್ರಿ ಅವರನ್ನು ಸನ್ಮಾನಿಸಲಾಯಿತು.
ಸುಲೋಚನಾ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶಾಂತಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!