Tuesday, October 22, 2024

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಉಡುಪಿ ಮಹಾಸಭೆ

ಜನಪ್ರತಿನಿಧಿ (ಉಡುಪಿ) : ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಉಡುಪಿ ಇದರ 2023-2024ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು (ದಿನಾಂಕ 21-09-2024 ನೇ ಶನಿವಾರ ಸಂಜೆ 4.30ಕ್ಕೆ) ಸಂಘದ ಅಧ್ಯಕ್ಷ ಹೆಚ್. ಮಹೇಶ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ಪದ್ಮಾವತಿ ಸಭಾಸದನ, ವಳಕಾಡು, ಉಡುಪಿ ಇಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದವಿಜಯ್ ಬಿ. ಎಸ್. ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕರಾದ ಲೋಹಿತ್ ಜಿ. ಸಾಲಿಯಾನ್ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

ಸಂಘವು ವರದಿ ವರ್ಷದಲ್ಲಿ 5.97 ಕೋಟಿ ರೂ. ದುಡಿಯುವ ಬಂಡವಾಳ, 4.24 ಕೋಟಿ ರೂ. ಹೊರಬಾಕಿ ಸಾಲವನ್ನು ಹೊಂದಿದ್ದು, 15.30 ಲಕ್ಷ ರೂ. ನಿವ್ವಳ ಲಾಭ ಪಡೆದು, ಸದಸ್ಯರಿಗೆ ಶೇ. 8ರಷ್ಟು ಡಿವಿಡೆಂಡ್ ಘೋಷಿಸಲಾಯಿತು. ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಗ್ರಾಹಕರು, ಪಿಗ್ಮಿ ಸಂಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!