spot_img
Tuesday, February 18, 2025
spot_img

ಯಡ್ತೆರೆ : ಕೆರೆಗೆ ಈಜಲು ಹೋದ ವಿದ್ಯಾರ್ಥಿಗಳಿಬ್ಬರ ಸಾವು !

ಜನಪ್ರತಿನಿಧಿ (ಕುಂದಾಪುರ/ಬೈಂದೂರು) : ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿರುವ ಘಟನೆ ನಿನ್ನೆ(ಮಂಗಳವಾರ) ಸಂಜೆ ಬೈಂದೂರು ತಾಲೂಕಿನ ಯಡ್ತೆರೆ ಎಂಬಲ್ಲಿ ನಡೆದಿದೆ.

ಬೈಂದೂರು ತಾಲೂಕು ಯಡ್ತೆರೆ ಗ್ರಾಮದ ಯೋಜನಾನಗರದ ನಿವಾಸಿ ಕೂಲಿ ಕಾರ್ಮಿಕ ಕೃಷ್ಣ ದೇವಾಡಿಗ ಎಂಬುವರ ಮಗ ನಾಗೇಂದ್ರ(ವ ೧೩) ಹಾಗೂ ಬೈಂದೂರು ರೈಲ್ವೇ ನಿಲ್ದಾಣದ ಬಳಿ ಜಿ. ಎಂ ಕಾಂಪೌಂಡ್‌ ನಿವಾಸಿ ಶಾನು ಶಾಲಿಯಾನ್‌ ಎನ್ನುವವರ ಮಗ ಶಾನು ಮೊಹಮ್ಮದ್‌ ಶಫಾನ್‌(ವ.೧೩) ಸಾವಿಗೀಡಾಗಿದ್ದಾರೆ.

ಬೈಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೃತ ವಿದ್ಯಾರ್ಥಿಗಳಿಬ್ಬರೂ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಶಾಲೆ ಮುಗಿಸಿ ಮನೆಗೆ ಬಂದು ಸಂಜೆ ಸಾಲ್ಕು ಗಂಟೆ ಸುಮಾರಿಗೆ ಗೆಳೆಯರಿಬ್ಬರೂ ಜೊತೆಗೂಡಿ ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿ ಯ ಕೆರೆಕಟ್ಟೆ ಎಂಬ ಕೆರೆಯಲ್ಲಿ ಈಜಲು ಹೋಗಿದ್ದರು ಎಂದು ಹೇಳಲಾಗಿದೆ.

ಸಂಜೆಕಳೆದು ರಾತ್ರಿಯಾದರೂ ವಿದ್ಯಾರ್ಥಿಗಳು ಮನೆಗೆ ಬಾಋಋ ಇದ್ದಾಗ ಕೆರೆ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಬಳಿ ಒಂದು ಸೈಕಲ್‌, ಬಟ್ಟೆ  ಹಾಗೂ ಎರಡು ಜೊತೆ ಚಪ್ಪಲಿಗಳು ಪತ್ತೆಯಾಗಿದ್ದು, ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಇಂದು(ಬುಧವಾರ) ನಸುಕಿನ ಜಾವ ಇಬ್ಬರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸದ್ಯ, ಮೃತ ವಿದ್ಯಾರ್ಥಿಗಳ ಶವವನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!