Sunday, September 8, 2024

ಮುದೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಪ್ರಶಸ್ತಿ ಪ್ರದಾನ

ಕುಂದಾಪುರ: ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಹೊಸದೆಹಲಿ ಇದರ ಬೆಂಗಳೂರು ಪ್ರಾದೇಶಿಕ ಶಾಖೆ ವತಿಯಿಂದ ಸಹಕಾರ ಸಂಘದ ಉತ್ಕರ್ಷತೆ ಮತ್ತು ಶ್ರೇಷ್ಠತೆಯ ಹದಿನಾಲ್ಕು ಅಂಶಗಳನ್ನು ಗಮನಿಸಿ ಈ ಪ್ರತಿಷ್ಠಿತ ನ್ಯಾಷನಲ್ ಅವಾರ್ಡ್ ನ್ನು ಮುದೂರು ವ್ಯವಸಾಯ ಸೇವಾ ಸಹಕಾರ ಸಂಘ ನಿ.ಮುದೂರು ಪಡೆದುಕೊಂಡಿದೆ.

ಬೆಂಗಳೂರು ರೀಜನಲ್ ಇನ್ ಸ್ಟಿಟ್ಯೂಟ್ ಆಪ್ ಕೋ ಆಪರೇಟಿವ್ ಕಾರ್ಪೊರೇಷನ್ ನ ಸಹ್ಯಾದ್ರಿ ಹಾಲ್ ನಲ್ಲಿ ಗುರುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಹಕಾರ ಸಂಘಗಳ ನಿಬಂದಕರಾದ ಡಾ.ಕ್ಯಾಪ್ಟನ್ ರಾಜೇಂದ್ರ ಐ.ಎ.ಸ್, ಮತ್ತು ಎನ್ ಸಿ ಡಿ ಸಿ ರೀಜನಲ್ ಡೈರೆಕ್ಟರ್ ತನೀಶ್ ಲಾಲ್, ಹಾಗೂ ಅಶ್ವಿನಿ ವೈ.ಟಿ ಅವರು ಸಂಸ್ಥೆಯ ಅಧ್ಯಕ್ಷರಾದ ಎಮ್ ವಿಜಯ ಶಾಸ್ತ್ರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಅವರ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ನಿಶಾದ್, ರಾಘವೇಂದ್ರ ಡಿ, ಬಸವ ನಾಯ್ಕ, ಸಿಬ್ಬಂದಿ ಮಂಜುನಾಥ ಬಿ.ಎಲ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!