Sunday, September 8, 2024

ಮೇ.29ಕ್ಕೆ ಮಾರಣಕಟ್ಟೆ ಮೇಳಗಳ ಕೊನೆಯ ದೇವರ ಸೇವೆ

ಕುಂದಾಪುರ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ವತಿಯಿಂದ ಮೇ 29 ರಂದು ರಾತ್ರಿ 9ಗಂಟೆಗೆ 2023-24ನೇ ಸಾಲಿನ ತಿರುಗಾಟದ ದೇವರ ಕೊನೆಯ ಸೇವೆ ಆಟ ಹಾಗೂ ನಿವೃತ್ತ ಕಲಾವಿದರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಅನುವಂಶೀಯ ಆಡಳಿತ ಮೊಕ್ತಸರ ಸಿ.ಸದಾಶಿವ ಶೆಟ್ಟಿ ವಹಿಸುವರು. ಯಕ್ಷಗಾನ ಪ್ರಸಂಗಕರ್ತ ಡಾ| ಬಸವರಾಜ್ ಶೆಟ್ಟಿಗಾರ್ ಸಮ್ಮಾನಿಸುವರು. ನಿವೃತ್ತ ಮ್ಯಾನೇಜರ್ ರಾಜೀವ ಶೆಟ್ಟಿ ವಂಡ್ಸೆ, ನಿವೃತ್ತ ಕಲಾವಿದ ಬಿ.ಎಚ್. ಮೂರ್ತಿಗೌಡ, ನಿವೃತ್ತ ಸಹಾಯಕ ಸಿಬಂದಿ ಸಂಜೀವ ಗಾಣಿಗ ಅವರನ್ನು ಸಮ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಪ್ರಸಂಗಕರ್ತ ರಘುರಾಮ ಶೆಟ್ಟಿ ಕಂದಾವರ ಹಾಗೂ ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಚಂದ್ರಶೇಖರ ಶೆಟ್ಟಿ ಕೆರಾಡಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!