spot_img
Sunday, February 15, 2026
spot_img

ಆರ್ಥಿಕ ಬಿಕ್ಕಟ್ಟು : 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ಮುಂದಾದ ಪ್ರತಿಷ್ಠಿತ ಬೈಜೂಸ್‌ !

ಜನಪ್ರತಿನಿಧಿ (ನವದೆಹಲಿ) : ಆರ್ಥಿಕ ಬಿಕ್ಕಟ್ಟಿನಿಂದ ಸೊರಗಿ ಹೋಗಿರುವ ದೇಶದ ಪ್ರತಿಷ್ಠಿತ ಬೈಜೂಸ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಿಂದ 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಉದ್ಯಮದ ಪುನರ್ರಚನೆಯ ಹಂತದಲ್ಲಿರುವುದಾಗಿ ಬೈಜೂಸ್ ತಿಳಿಸಿದೆ.

15-20 ದಿನಗಳ ಹಿಂದೆ ಎಂಬಾಟಲ್ಡ್ ಎಡ್ಟೆಕ್ ಕಂಪನಿಯಲ್ಲಿ ವಜಾಗೊಳಿಸುವಿಕೆ ಆರಂಭವಾಗಿದೆ. ಇದು 500 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಇತ್ತೀಚಿನ ಸುತ್ತಿನ ಉದ್ಯೋಗ ಕಡಿತ ಸೇಲ್ಸ್, ಶಿಕ್ಷಕರು ಹಾಗೂ ಕೆಲವು ಬೋಧನಾ ಕೇಂದ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗಿದೆ.

ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ತನ್ನ ಕೆಲವು ಹೂಡಿಕೆದಾರರೊಂದಿಗೆ ಕಾನೂನು ವಿವಾದದಲ್ಲಿ ಸಿಲುಕಿರುವ ಬೈಜೂಸ್‌ ಯಾವುದೇ ಅಧಿಕೃತ ಹೇಳಿಕೆಯನ್ನು ಈವರೆಗೆ ನೀಡಿಲ್ಲ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!