spot_img
Friday, May 23, 2025
spot_img

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತ್ಯಂತ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಿ : ಚುನಾವಣಾ ಆಯೋಗಕ್ಕೆ ಬಿಜೆಪಿ ಒತ್ತಾಯ

ಜನಪ್ರತಿನಿಧಿ (ಬೆಂಗಳೂರು) : ಗೂಂಡಾಗಿರಿ – ದಬ್ಬಾಳಿಕೆ ಮಾಡುವುದು, ಜನತೆ ಅದಕ್ಕೂ ಬಗ್ಗದಿದ್ದಲ್ಲಿ ಆಸೆ-ಆಮಿಷಗಳನ್ನು ಒಡ್ಡುವುದು. ಇದು ಕನಕಪುರವನ್ನು ರಿಪಬ್ಲಿಕ್ ಅನ್ನಾಗಿಸಿಕೊಂಡವರ ಕತೆ. ವಿಧಾನಸಭಾ ಚುನಾವಣೆಯಲ್ಲಿ ಗಿಫ್ಟ್‌ ಕಾರ್ಡ್‌ ಹಂಚಿ, ಗೆದ್ದ ಬಳಿಕ ಜನರ ಕಿವಿ ಮೇಲೆ ಹೂವಿಟ್ಟಿದ್ದಾಯ್ತು. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸೋಲು ಶತ”ಸಿದ್ದ” ಎಂದು ಅರಿತಿರುವ ರಾಜ್ಯ ಕಾಂಗ್ರೆಸ್ ಮತದಾರರಿಗೆ ಆಮಿಷ ಒಡ್ಡಲು ಕುಕ್ಕರ್ ಹಾಗೂ ಸೀರೆ ಹಂಚುತ್ತಿದೆ ಎಂದು ಬಿಜೆಪಿ ಪರೋಕ್ಷವಾಗಿ ಸಂಸದ ಡಿ,ಕೆ ಸುರೇಶ್‌ ಅವರ ಕಾಲೆಳೆದಿದೆ.

ಕೇಂದ್ರ ಚುನಾವಣಾ ಆಯೋಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತ್ಯಂತ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಿ, ಚುನಾವಣಾ ಅಕ್ರಮಗಳನ್ನು ತಡೆಯಲು ತತಕ್ಷಣವೇ ಅರೆ ಸೇನಾ ಪಡೆಗಳ ತುಕಡಿಯನ್ನು ನಿಯೋಜಿಸಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.

ಕ್ಷೇತ್ರದಲ್ಲಿ ಕುಕ್ಕರ್‌ ಹಾಗೂ ಸೀರೆ ಹಂಚುತ್ತಿದ್ದಾರೆ ಎಂದು ತೋರಿಸುವ ಒಂದು ಸಣ್ಣ ವೀಡಿಯೋ ತುಣುಕೊಂದನ್ನು ತನ್ನ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಹಂಚಿಕೊಂಡಿರುವ ಬಿಜೆಪಿ ಸಂಸದ ಡಿ.ಕೆ ಸುರೇಶ್‌ ಅವರನ್ನು ಟೀಕಿಸಿದೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!