Sunday, September 8, 2024

ದೇಶ “ಜೈ ಶ್ರೀ ರಾಮ್” ಜಪಿಸಬೇಕೆಂದು ಮತ್ತು ಹಸಿವಿನಿಂದ ಸಾಯಬೇಕೆಂದು ಮೋದಿ ಬಯಸುತ್ತಾರೆ : ರಾಗಾ ಟೀಕೆ

ಜನಪ್ರತಿನಿಧಿ (ಮಧ್ಯಪ್ರದೇಶ) : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇಂದು(ಮಂಗಳವಾರ) ದೇಶದಲ್ಲಿ ನಿರುದ್ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದು, ದೇಶ “ಜೈ ಶ್ರೀ ರಾಮ್” ಎಂದು ಜಪಿಸಬೇಕೆಂದು ಮತ್ತು ಹಸಿವಿನಿಂದ ಸಾಯಬೇಕೆಂದು ಮೋದಿ ಬಯಸುತ್ತಾರೆ ಎಂದು ಹೇಳಿದ್ದಾರೆ.

ಇಂದು ಮಧ್ಯಪ್ರದೇಶದ ಸಾರಂಗ್‌ಪುರದಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಪುನರಾರಂಭಗೊಂಡ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ಎತ್ತಿದ ಘೋಷಣೆಗಳನ್ನು ಸ್ವಾಗತಿಸಿದ ರಾಹುಲ್ ಗಾಂಧಿ, ನಿರುದ್ಯೋಗದ ವಿರುದ್ಧ ಪ್ರಧಾನಿಯನ್ನು ಟೀಕಿಸಿದರು, ಯುವ ನಿರುದ್ಯೋಗಿಗಳು “ದಿನವಿಡೀ ರೀಲ್‌ಗಳನ್ನು (ಸಾಮಾಜಿಕ ಮಾಧ್ಯಮಗಳಲ್ಲಿ) ನೋಡುತ್ತಿರುತ್ತಾರೆ” ಎಂದು ಹೇಳಿದರು.

“ಪ್ರಧಾನಿ ನೀವು ದಿನವಿಡೀ ನಿಮ್ಮ ಫೋನ್‌ಗಳನ್ನು ನೋಡಬೇಕು, ಜೈ ಶ್ರೀ ರಾಮ್ ಎಂದು ಜಪಿಸಬೇಕು ಮತ್ತು ನಂತರ ಹಸಿವಿನಿಂದ ಸಾಯಬೇಕು” ಎಂದು ಬಯಸುತ್ತಾರೆʼ ಎಂದು ಅವರು ಹೇಳಿದರು.

ಭಾನುವಾರ ಗ್ವಾಲಿಯರ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮಧ್ಯೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, “ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ದುಪ್ಪಟ್ಟು ಇದೆ. ಈ ಸಂಖ್ಯೆ ಇಲ್ಲಿ ಶೇಕಡಾ 23 ಮತ್ತು ಅಲ್ಲಿ ಶೇಕಡಾ 12 ಇದೆʼ ಎಂದು ಹೇಳಿದರು.

ದೇಶದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಬಾಂಗ್ಲಾದೇಶ ಮತ್ತು ಭೂತಾನ್‌ಗಿಂತ ಹೆಚ್ಚಾಗಿದೆ ಮತ್ತು ಭಾರತದ ನಿರುದ್ಯೋಗ ದರವು 40 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಅವರು ಮೋದಿ ವಿರುದ್ಧ ರಾಹುಲ್‌ ಟೀಕೆ ಮಾಡಿದರು.

ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರ ಯಾತ್ರೆ ಬರುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು “ಮೋದಿ, ಮೋದಿ” ಮತ್ತು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!