Sunday, September 8, 2024

ಹಾಲಾಡಿ ಶ್ರೀಮರಳು ಚಿಕ್ಕು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು ಹಸ್ತಾಂತರ

ಕುಂದಾಪುರ : ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ ಟ್ರಸ್ಟ್ (ರಿ.) ಕುಂದಾಪುರ-೨ ಕೋಟೇಶ್ವರ ಯೋಜನಾ ವ್ಯಾಪ್ತಿಯ ಹಾಲಾಡಿ ವಲಯದ ಹಾಲಾಡಿ ಗ್ರಾಮದ ಶ್ರೀ ಕ್ಷೇತ್ರ ಮರಳು ಚಿಕ್ಕು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ರೂ.1.00 ಲಕ್ಷ ಮೊತ್ತ ಮಂಜೂರು ಮಾಡಿದ್ದು, ಇದರ ಡಿಡಿಯನ್ನು ಡಿ.೧೪ರಂದು ತಾಲೂಕಿನ ಯೋಜನಾಧಿಕಾರಿ ನಾರಾಯಣ ಪಾಲನ್ ಅವರು ಸಮಿತಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ದಯಾನಂದ ಹೆಗಡೆ ಆಡಳಿತ ಮೊಕ್ತೇಸರರಾದ ಅಮರನಾಥ ಶೆಟ್ಟಿ ಕಾರ್ಯದರ್ಶಿಯಾದ ಜ್ಞಾನೇಶ ಶೆಟ್ಟಿ ಮತ್ತು ಸಮಿತಿಯ ಸದಸ್ಯರಾದ ಚರಣ ಹೆಗಡೆ ರಜಿತ್ ಕುಮಾರ್ ಶೆಟ್ಟಿ ವಿಶ್ವನಾಥ ಆಚಾರ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಸದಸ್ಯರಾದ ಸೂರ್ಯಪ್ರಕಾಶ್ ದಾಮ್ಲೆ, ಸತ್ಯನಾರಾಯಣ ರಾವ್ ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಸ್ಥಳೀಯ ಸೇವಾ ಪ್ರತಿನಿಧಿಯಾದ ಜ್ಯೋತಿಯವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!