Sunday, September 8, 2024

ವಕ್ವಾಡಿ ವಾರಾಹಿ ಏತ ನೀರಾವರಿ ಯೋಜನೆಗೆ ಗ್ರಾಮಸ್ಥರಿಂದ ಮನವಿ

ಕುಂದಾಪುರ : ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ತೆಂಕಬೆಟ್ಟು ಕುಂದಾಪುರ ಮನೆ ಸಮೀಪದ ವಾರಾಹಿ ನಾಲೆಯಿಂದ ಹೊಳೆಗೆ ಹರಿದು ಬರುತ್ತಿರುವ ನೀರಿಗೆ ಏತ ನೀರಾವರಿ ಮೂಲಕ 10 ಎಚ್. ಪಿ. ವಿದ್ಯುತ್ ಪಂಪ್ ನಿಂದ ನೀರು ಹರಿಯ ಬಿಟ್ಟು ಇಲ್ಲಿಂದ 1 ಕಿ. ಮೀ ದೂರದ ದೇವರಾಡಿ ದೇವಸ್ಥಾನದ ಹತ್ತಿರದ ಗುಂಡಿಯಿಂದ ಚರಂಡಿ ಮೂಲಕ ಸುಮಾರು 100 ಮನೆಗಳ ಬಾವಿಗಳಿಗೆ ನೀರು ಹರಿದಾಗ ಇಲ್ಲಿನ ಜನರಿಗೆ ಕೃಷಿ, ಕುಡಿಯುವ ನೀರು, ತೋಟಗಳಿಗೆ ನೀರು ಹರಿದು ಸಮಸ್ತ ನಾಗರಿಕರಿಗೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ . ಈ ಬಗ್ಗೆ ಈ ಭಾಗದ ಸಾರ್ವಜನಿಕರು ಮನವಿ ಮಾಡಿದ್ದಾರೆ.

ನಾಗರಿಕರು ಮಾಡಿಕೊಂಡಿರುವ ಮನವಿಗೆ ಪಂಚಾಯತಿಯವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾಗರಿಕರ ಪರವಾಗಿ ಸೀತಾರಾಮ ಶೆಟ್ಟಿ, ಭಾಸ್ಕರ್, ನಾರಾಯಣ ,ಶಂಕರ್ ಶೆಟ್ಟಿ, ಉದಯ ಶೆಟ್ಟಿ, ರಾಕೇಶ್ ಶೆಟ್ಟಿ, ಬೆಳ್ತಾಡಿ ಮನೆ ಬೇಬಿ ಶೆಡ್ತಿ ಇನ್ನಿತರರು ಮನವಿ ನೀಡಿದರು. ಪಂಚಾಯಿತಿ ಅಧ್ಯಕ್ಷರಾದ ಅಶಾಲತಾ, ರಮೇಶ್ ಶೆಟ್ಟಿ, ಭಾರತಿ, ಅಭಿವೃದ್ಧಿ ಅಧಿಕಾರಿ ಮಧುಸೂದನ್ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!