Sunday, September 8, 2024

ಬೈಂದೂರು ಬಿಜೆಪಿ: ಅಭ್ಯರ್ಥಿಗಳ ಪಟ್ಟಿಗೆ ಟಿ.ಎನ್. ರಘುರಾಮ ಶೆಟ್ಟಿ ಸೇರ್ಪಡೆ


ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿ ಅಕಾಂಕ್ಷಿಗಳು ಹೆಚ್ಚಾಗುತ್ತಲೇ ಇದ್ದಾರೆ. ಹಾಲಿ ಶಾಸಕರಿಗೆ ಟಿಕೇಟು ತಪ್ಪಲಿದೆಯೇ ಎಂಬ ಅನುಮಾನ ಹೆಚ್ಚಾಗತೊಡಗಿದೆ. ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿಯವರು ಟಿಕೇಟಿಗಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ತನ್ಮಧ್ಯದಲ್ಲಿ ಬಿಜೆಪಿಯ ಕ್ರೀಯಾ ಶೀಲನಾಯಕ, ಟಿ.ಎನ್.ರಘುರಾಮ ಶೆಟ್ಟಿ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿಯ ಐ.ಎಂ.ಜಯರಾಮ ಶೆಟ್ಟರ ಅವಧಿಯಲ್ಲಿ ಪಕ್ಷದಲ್ಲಿ ಗುರುತಿಸಿಕೊಂಡ ರಘುರಾಮ ಶೆಟ್ಟಿಯವರು ಇಂದಿಗೂ ಬಿಜೆಪಿ ಪಕ್ಷದಲ್ಲಿ ಸಕ್ರೀಯದ್ದಾರೆ. ಸುಕುಮಾರ ಶೆಟ್ಟಿಯವರ ಚುನಾವಣಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಇವರು ಕಾವ್ರಾಡಿ ಜಿಲ್ಲಾ ಪಂಚಾಯತ್ ಸಂಪೂರ್ಣ ಜವಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದರು. ಕ್ಷೇತ್ರದಾದ್ಯಂತ ಈಗಾಗಲೇ ತಿರುಗಾಟ ಮಾಡಿದ್ದು ಕಾರ್ಯಕರ್ತರ ಸಂಪರ್ಕದಲ್ಲಿದ್ದಾರೆಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಮ್ಮ ರಘು ಅಣ್ಣ ನಮ್ಮ ಹೆಮ್ಮೆ ಎಂಬ ಸ್ಲೋಗನ್‌ಗಳು ಹರಿದಾಡುತ್ತಿದೆ. ರಘುರಾಮ ಶೆಟ್ಟರಿಗೆ ಟಿಕೇಟು ಯಾಕೆ ಕೊಡಬಾರದು ಎಂದು ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಕಳೆದ 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ತಲ್ಲೂರು ರಘುರಾಮ ಶೆಟ್ಟಿಯವರು ಇದೀಗ ಬಿಜೆಪಿಯ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ. ಇವರು ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಆತ್ಮೀಯ ಒಡನಾಡಿಯೂ ಹೌದು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!