Thursday, March 28, 2024

‘ತಪೋವನ ಪರಂಪರಾ’ದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನ

ಕೋಟ : ಮಣಿಪಾಲ ದಶರಥ ನಗರದ ಪ್ರಗತಿ ಪ್ರೈಡ್‌ನಲ್ಲಿರುವ ಲಲಿತ ಕಲೆ, ಕಲಾವಿದ, ಕಲಾ ಸೌಂದರ್ಯ ಮೌಲ್ಯವರ್ಧಕಗಳ ವೇದಿಕೆ ತಪೋವನ ಪರಂಪರಾದ ಆಶ್ರಯದಲ್ಲಿ ಯಂಗ್ ಇಂಡಿಯಾ ಸಂಸ್ಥೆಯ ಮಂಗಳೂರಿನ ಶಾಖೆಯ ಅಂತರಾಜ್ಯದ ಸದಸ್ಯರಿಗಾಗಿ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ಬಣ್ಣಗಾರಿಕೆ, ವೇಷಕೌಶಲ್ಯದ ಪ್ರಾತ್ಯಕ್ಷಿಕೆ ಮತ್ತು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.

ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್.ಶ್ರೀಧರ ಹಂದೆ ನಿರ್ದೇಶನದಲ್ಲಿ, ಉಪನ್ಯಾಸಕ ಸುಜಯೀಂದ್ರ ಹಂದೆ ಸಾರಥ್ಯದಲ್ಲಿ ಸುಹಾಸ ಕರಬ, ಕೂಡ್ಲಿ ದೇವದಾಸ ರಾವ್, ಸ್ಕಂದ ಉರಾಳ, ಮನೋಜ್ ಆಚಾರ್ ಮೊದಲಾದ ಕಲಾವಿದರು ಭಾಗವಹಿಸಿದ್ದರು. ಅನ್ಯ ರಾಜ್ಯಗಳಿಂದ ಬಂದ ಸುಮಾರು ಐವತ್ತು ಮಂದಿ ಯಂಗ್ ಇಂಡಿಯಾ ಸದಸ್ಯರು ಕರ್ನಾಟಕದ ಕಲೆ ಯಕ್ಷಗಾನವನ್ನು ಕಣ್ತುಂಬಿಸಿಕೊಂಡರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!