Sunday, September 8, 2024

ಕೊರಗರ ಮೇಲೆ ಪೊಲೀಸ್ ದೌರ್ಜನ್ಯ: ಎಸ್.ರಾಜು ಪೂಜಾರಿ ಖಂಡನೆ

ಬೈಂದೂರು : ಕೋಟದಲ್ಲಿ ಈಚೆಗೆ ವಿವಾಹಪೂರ್ವ ಮೆಹಂದಿ ನಡೆಸುತ್ತಿದ್ದ ಅಮಾಯಕ ಕೊರಗ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದುದಲ್ಲದೆ, ಅವರ ವಿರುದ್ಧವೇ ಪ್ರಕರಣ ದಾಖಲಿಸಿದ ಕೋಟ ಪೊಲೀಸರ ಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಖಂಡಿಸಿದ್ದಾರೆ.

ಜಿಲ್ಲೆಯ ಜನಸಮುದಾಯದ ಅತ್ಯಂತ ಅಂಚಿನಲ್ಲಿರುವ ಬುಡಕಟ್ಟು ಜನಾಂಗದ ಕೊರಗರು ತಲಾಂತರಗಳಿಂದ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದವರು. ಶಾಂತಿಯಿಂದ ಜೀವನ ನಡೆಸುತ್ತಿರುವ ಅವರು ಎಂದೂ ಕಾನೂನು ವಿರುದ್ಧ ಹೋದವರಲ್ಲ. ಅಂತವರ ವಿರುದ್ಧ ಪೊಲೀಸರು ನಡೆಸಿದ ದರ್ಪ, ದೌರ್ಜನ್ಯ ಕ್ಷಮಾರ್ಹವಲ್ಲ. ಸರ್ಕಾರ ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಕೊರಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜು ಪೂಜಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!