Sunday, September 8, 2024

ಮೂಡುಗಲ್ಲು: ಹಡಿಲು ಭೂಮಿಗೆ ಹಸಿರು ಸ್ಪರ್ಶ


ಕುಂದಾಪುರ: ಕೆರಾಡಿಯಿಂದ 4 ಕಿ.ಮೀ. ದೂರದಲ್ಲಿರುವ ಪ್ರಕೃತಿ ರಮಣೀಯ ಪ್ರದೇಶ ಮೂಡುಗಲ್ಲು. ಇಲ್ಲಿ ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯವಿದೆ. ಇಂದಿಗೂ ವಿದ್ಯುತ್ ಸಂಪರ್ಕ, ಸರಿಯಾದ ಮಾರ್ಗ ಕಾಣದ, ಮೂಲಭೂತ ಸೌಕರ್ಯ ವಂಚಿತ ಕುಗ್ರಾಮ. ಕಳೆದ 15 ವರ್ಷದಿಂದ ಇಲ್ಲಿ ಸುಮಾರು 25 ಎಕ್ರೆ ಭೂಮಿಯಲ್ಲಿ ಹೆಚ್ಚಿನವು ಬರಡಾಗಿತ್ತು. ಈ ವರ್ಷ ದೇವಸ್ಥಾನದ ಪೂಜಾ ಅರ್ಚಕರು, ಆರು ಮನೆಯ ಪ್ರಮುಖರ ಸಲಹೆ ಸಹಕಾರದೊಂದಿಗೆ ಯುವ ಉದ್ಯಮಿ ಕೃಷಿಕರಾದ ಕೂಕನಾಡ್ ಸೋಮಶೇಖರ್ ಶೆಟ್ಟಿ ಹಾಗೂ ಕೃಷಿಕ ಕೂಕನಾಡು ತೋಮಸ್ ಕೆ.ಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ )ಕುಂದಾಪುರ ತಾಲ್ಲೂಕು ಹಾಗೂ ಸಿದ್ದವನ ನರ್ಸರಿ ಕಾಳಾವರ ಇವರ ಮಾರ್ಗದರ್ಶನದಲ್ಲಿ ಯಂತ್ರ ಶ್ರೀ ಕಾರ್ಯಕ್ರಮದ ಮೂಲಕ 6 ಎಕ್ರೆ ಹಡಿಲು ಭೂಮಿಗೆ ಹಸಿರು ಸ್ಪರ್ಶವನ್ನು ನೀಡುವ ಕಾಯಕಕ್ಕೆ ಯುವ ಉದ್ಯಮಿ ಸುಂದರ್ ಶೆಟ್ಟಿ ಯವರು ಚಾಲನೆ ನೀಡಿದರು.


ಈ ಸಂದರ್ಭ ಯುವಕೃಷಿಕ ಕೃಷಿಕರಾದ ತೋಮಸ್ ಕೆ.ಜೆ, ಸ್ಥಳೀಯ ರೈತರಾದ ಸೀತಾರಾಮ್ ಶೆಟ್ಟಿ, ನಾರಾಯಣ ಶೆಟ್ಟಿ, ತಾಲ್ಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್, ಚಾಲಕರಾದ ಸದಾನಂದ ಪೂಜಾರಿ, ಸ್ಥಳೀಯ ರೈತರಾದ ಸಂಜೀವ್ ಶೆಟ್ಟಿ, ಸೂಲಿಯಣ್ಣ ಶೆಟ್ಟಿ ಮೂಡುಗಲ್ಲು, ಗೋಪಾಲ್ ನಾಯ್ಕ, ಪ್ರವೀಣ್ ನಾಯ್ಕ, ಭಾಸ್ಕರ ನಾಯ್ಕ ಉಪಸ್ಥಿತರಿದ್ದರು.

ಹಲವು ವರ್ಷಗಳಿಂದ ಹಡಿಲು ಬಿದ್ದಿರುವ ಭೂಮಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!