Sunday, September 8, 2024

ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ

ಕುಂದಾಪುರ, ನ.6: ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ನಿ., ಇದರ ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು.

‘ಎ’ ವರ್ಗದ ಸದಸ್ಯ ಕ್ಷೇತ್ರದಿಂದ ಹೆಚ್.ಹರಿಪ್ರಸಾದ್ ಶೆಟ್ಟಿ-ಮೊಳಹಳ್ಳಿ ವ್ಯ.ಸೇ.ಸ.ಸಂಘ ನಿ., ಬಿದ್ಕಲ್‌ಕಟ್ಟೆ; ಎಸ್.ರಾಜು ಪೂಜಾರಿ-ಮರವಂತೆ ಬಡಾಕೆರೆ ವ್ಯ.ಸೇ.ಸ.ಸಂಘ ನಿ., ನಾವುಂದ; ಮೋಹನ್ ದಾಸ್ ಶೆಟ್ಟಿ ಎಂ-ಕೋಟೇಶ್ವರ ವ್ಯ.ಸೇ.ಸ.ಸಂಘ ನಿ., ಕೋಟೇಶ್ವರ; ಶರತ್ ಕುಮಾರ್ ಶೆಟ್ಟಿ-ಪಂಚಗಂಗಾ ವ್ಯ.ಸೇ.ಸ.ಸಂ ನಿ, ಹೆಮ್ಮಾಡಿ; ಕೆ.ಭುಜಂಗ ಶೆಟ್ಟಿ-ವಂಡ್ಸೆ ಸಿ.ಎ ಸಂಘ ನಿ, ವಂಡ್ಸೆ; ರವಿ ಗಾಣಿಗ-ಮಾನಂಜೆ ವ್ಯ.ಸೇ.ಸ.ಸಂಘ ನಿ., ಕಮಲಶಿಲೆ; ಕೆ.ಮೋಹನ್ ಪೂಜಾರಿ-ಖಂಬದಕೋಣೆ ರೈ ಸೇ.ಸ.ಸಂಘ ನಿ., ಉಪ್ಪುಂದ; ಆನಂದ ಬಿಲ್ಲವ-ಗಂಗೊಳ್ಳಿ ಸೇವಾ ಸಹಕಾರಿ ಸಂಘ ನಿ., ಗಂಗೊಳ್ಳಿ; ಕೆ.ಸುಧಾಕರ ಶೆಟ್ಟಿ-ಕರ್ಕುಂಜೆ ಸಹಕಾರಿ ವ್ಯ.ಸಂಘ ನಿ., ಕರ್ಕುಂಜೆ; ಪ್ರಭಾಕರ ಶೆಟ್ಟಿ-ಜಡ್ಕಲ್ ವ್ಯ.ಸೇ.ಸ.ಸಂಘ ನಿ., ಜಡ್ಕಲ್; ಎಸ್.ಜಯರಾಮ ಶೆಟ್ಟಿ ಬೆಳ್ವೆ ವ್ಯ.ಸೇ.ಸ.ಸಂಘ ನಿ., ಬೆಳ್ವೆ ಅವಿರೋಧವಾಗಿ ಆಯ್ಕೆಯಾದರು.

‘ಬಿ’ ವರ್ಗದ ಸದಸ್ಯ ಕ್ಷೇತ್ರದಿಂದ ಚಂದ್ರಶೇಖರ ಶೆಟ್ಟಿ ಚಿತ್ತೂರು, ದಿನಪಾಲ ಶೆಟ್ಟಿ ಮೊಳಹಳ್ಳಿ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿಯಾದ ಕುಂದಾಪುರ ಉಪ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಅಧಿಕೃತ ಘೋಷಣೆ ಮಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!