spot_img
Monday, February 16, 2026
spot_img

ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭಜನಾ ಮಂಡಳಿ: ಭಜನಾ ಪ್ರವಾಸ

ಬ್ರಹ್ಮಾವರ: ಕರಾವಳಿ ಜಿಲ್ಲೆಯಲ್ಲಿ 145 ವರ್ಷ ಇತಿಹಾಸದ ಅತೀ ಪುರಾತನ ಭಜನಾ ಮಂಡಳಿಯಾದ ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭಜನಾ ಮಂಡಳಿ ಈ ವರ್ಷ ಸಾವಿರಾರು ಕಿಮಿ ದೂರದ ಪಂಡರಾಪುರ ಕೊಲ್ಲಾಪುರ ಮತ್ತು ಗಾಣಿಗಾಪುರಕ್ಕೆ 3 ದಿನದ ಭಜನಾ ಪ್ರವಾಸ ಮಾಡಿ ಸೋಮವಾರ ಮರಳಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಬಳಿಕ ಭಜನಾ ತಂಡದ 40 ಮಂದಿ ಪುರುಷರು ಸಮವಸ್ತ್ರಧಾರಿಗಳಾಗಿ ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಜ್ಯೋತಿಭಾ, ಪಂಡರಾಪುರ ಮತ್ತು ಗಾಣಿಗಾಪುರ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಭಜನಾ ಸೇವೆ ನಡೆಸಿದರು.

ಭಜನಾ ಮಂಡಳಿಯಲ್ಲಿ ನಾನಾ ಕೆಲಸ ಮತ್ತು ವ್ಯವಹಾರ ಹೊಂದಿದ ಸದಸ್ಯರೇ 3 ದಿನಕ್ಕೆ ಬೇಕಾಗುವ ಆಹಾರ ಸಾಮಗ್ರಿ ಬೇಳೆ ಕಾಳು ನೀರ ನ್ನು ಕೊಂಡುಹೋಗಿ ದಾರಿ ಮಧ್ಯದಲ್ಲಿ ಆಹಾರವನ್ನು ತಯಾರು ಮಾಡಿ 3 ದಿನಗಳ ಕಾಲ ಸಹ ಭೊಜನ ಆಹಾರ ವಿಹಾರವನ್ನು ಜೊತೆಯಾಗಿ ಮಾಡಿ ಭಜನೆಮಾಡಿದಲ್ಲಿ ವಿಭಜನೆ ಇಲ್ಲ ಎನ್ನುವುದನ್ನು ಸಾಬೀತು ಮಾಡುವುದರ ಜೊತೆ ಸನಾತನ ಸಂಸ್ಕೃತಿಯ ಏಖತೆಯನ್ನು ತೋರಿಸಿ ಜಿಲ್ಲೆಯ ನಾನಾ ಭಜನಾ ಮಂಡಳಿಗೆ ಮಾದರಿಯಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!