spot_img
Wednesday, April 1, 2026
spot_img

625 ಹುದ್ದೆಗಳು !!! ಭಾರತೀಯ ಸೇನೆಯಲ್ಲಿ ಉದ್ಯೋಗವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ

ಜನಪ್ರತಿನಿಧಿ (ಮಾಹಿತಿ) : ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಭಾರತೀಯ ಸೇನೆಯಲ್ಲಿ ಉದ್ಯೋಗ ಅವಕಾಶ ಅರಸುತ್ತಿರುವವರಿಗೆ ಇದು ಸುವರ್ಣವಕಾಶ.

ಭಾರತೀಯ ಸೇನೆಯು ಡೈರೆಕ್ಟರ್ ಜನರಲ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಸೇನೆಯಲ್ಲಿ ಕೆಲಸ ಮಾಡಲು ಬಯಸುವವರು joinindianarmy.nic.in ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸೇನೆಯ ಈ ನೇಮಕಾತಿಗೆ ಈಗಾಗಲೇ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಈ ನೇಮಕಾತಿಯ ಮೂಲಕ ಒಟ್ಟು 625 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಖಾಲಿಯಿರುವ ಹುದ್ದೆಗಳ ವಿವರ
ಲೋವರ್ ಡಿವಿಷನ್ ಕ್ಲರ್ಕ್ (ಎಲ್ಡಿಸಿ) – 56 ಹುದ್ದೆಗಳು
ಫೈರ್ಮ್ಯಾನ್ – 28 ಹುದ್ದೆಗಳು
ಟ್ರೇಡ್ಸ್ಮನ್ ಮೇಟ್ – 228 ಹುದ್ದೆಗಳು
ಫಿಟ್ಟರ್ (ಸ್ಕಿಲ್ಡ್) – 27 ಹುದ್ದೆಗಳು
ಎಲೆಕ್ಟ್ರಿಷಿಯನ್ (ಪವರ್) (ಹೈ ಸ್ಕಿಲ್ಡ್ -2) – 1 ಪೋಸ್ಟ್
ವೆಹಿಕಲ್ ಮೆಕ್ಯಾನಿಕ್ – 90 ಹುದ್ದೆಗಳು
ಕುಕ್ – 5 ಪೋಸ್ಟ್
ಸ್ಟೋರ್ ಕೀಪರ್ – 9 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) – 13 ಹುದ್ದೆಗಳು
ಮೆಷಿನಿಸ್ಟ್ (ಸ್ಕಿಲ್ಡ್) – 13 ಹುದ್ದೆಗಳು
ಆರ್ಡಿನೆನ್ಸ್ ಮೆಕ್ಯಾನಿಕ್ (ಹೈ ಸ್ಕಿಲ್ಡ್-2) – 1
ಸ್ಟೆನೋಗ್ರಾಫರ್ ಗ್ರೇಡ್ -2
ವಾಷರ್ಮನ್-3
ಎಲೆಕ್ಟ್ರಿಷಿಯನ್-32
ಫಾರ್ಮಾಸಿಸ್ಟ್-1 ಹುದ್ದೆ
ಫೈರ್ ಇಂಜಿನ್ ಡ್ರೈವರ್-1 ಹುದ್ದೆ
ವೆಲ್ಡರ್ (ಸ್ಕಿಲ್ಡ್)-12 ಹುದ್ದೆಗಳು
ಟೆಲಿಕಮ್ಯುನಿಕೇಷನ್ ಮೆಕ್ಯಾನಿಕ್-52 ಹುದ್ದೆಗಳು
ಇಂಜಿನಿಯರ್ ಎಕ್ವಿಪ್ಮೆಂಟ್ ಮೆಕ್ಯಾನಿಕ್-5 ಹುದ್ದೆಗಳು
ಬಾರ್ಬರ್-4 ಹುದ್ದೆಗಳು
ಅಪ್ಹೋಲ್ಸ್ಟರ್-1 ಹುದ್ದೆ
ಟಿನ್ ಅಂಡ್ ಕಾಪರ್ ಸ್ಮಿತ್ (ಸ್ಕಿಲ್ಡ್)-22 ಹುದ್ದೆಗಳು
ಹೋಲ್ಡರ್ (ಸ್ಕಿಲ್ಡ್)-1 ಹುದ್ದೆಗಳು
ವೆಹಿಕಲ್ ಮೆಕ್ಯಾನಿಕ್ (ಮೋಟಾರ್ ವೆಹಿಕಲ್)-15 ಹುದ್ದೆಗಳು
ಡ್ರಾಫ್ಟ್ಸ್ಮನ್ ಗ್ರೇಡ್-1 ಹುದ್ದೆಗಳು ಖಾಲಿ ಇವೆ.

 ವಯೋಮಿತಿ

ಫೈರ್ ಇಂಜಿನ್ ಡ್ರೈವರ್ ಹುದ್ದೆಗಳಿಗೆ 18 ರಿಂದ 30 ವರ್ಷ, ಇತರೆ ಹುದ್ದೆಗಳಿಗೆ 18 ರಿಂದ 25 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ ತರಗತಿ, ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರಬೇಕು.

ವೇತನ
ಫಿಟ್ಟರ್ (ಸ್ಕಿಲ್ಡ್) ಲೆವೆಲ್ 2 : 19,900 ರಿಂದ 63,200 ರೂಪಾಯಿ.

ವೆಹಿಕಲ್ ಮೆಕ್ಯಾನಿಕ್ ಲೆವೆಲ್ 4 : 25,500 ರಿಂದ 81,100 ರೂಪಾಯಿ.

ಟ್ರೇಡ್ಸ್ ಮನ್ ಮೇಟ್ ಲೆವೆಲ್ 1 : 18,000 ರಿಂದ 56,900 ರೂಪಾಯಿ.

ಫೈರ್ ಮ್ಯಾನ್ ಲೆವೆಲ್ 2 : 19,900 ರಿಂದ 63,200 ರೂಪಾಯಿ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆ/ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪಿಇಟಿ ಮತ್ತು ಪಿಎಸ್ಟಿ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ  ಇರುತ್ತದೆ. ಇವುಗಳಲ್ಲಿ ಅಭ್ಯರ್ಥಿ ಉತ್ತೀರ್ಣರಾಗಬೇಕಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!