spot_img
Friday, May 23, 2025
spot_img

ಹೂವಿನಕೋಲು ಕಲೆಯನ್ನು ಪ್ರೋತ್ಸಾಹಿಸಬೇಕಾದದ್ದು ಪ್ರಜ್ಞಾವಂತ ನಾಗರಿಕರ ಕರ್ತವ್ಯ: ಕೋಟ ಶ್ರೀನಿವಾಸ ಪೂಜಾರಿ

ಕೋಟ:ಹೂವಿನಕೋಲು ಪ್ರಾಚೀನ ಕಲೆ. ಈ ಕಲೆ ನಶಿಸಿಯೇ ಹೋದ ಹೊತ್ತಿನಲ್ಲಿ ಕೈಗೆತ್ತಿಕೊಂಡು ಮತ್ತೆ ಮನೆ ಮನೆ ಸುತ್ತಿ ಬೆಳಗಿಸಿದ ಸಂಸ್ಥೆ ಯಶಸ್ವೀ ಕಲಾವೃಂದ. ಮಕ್ಕಳ ಮೂಲಕ ಮನೆಗಳಲ್ಲಿ ಅರಳುವ ಕಲೆ ಹೂವಿನಕೋಲು ಪ್ರಕಾರ. ಈ ಕಲೆ ಸರ್ವವ್ಯಾಪಿಯಾಗಬೇಕು. ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕಾದದ್ದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ವ್ಯಕ್ತಪಡಿಸಿದರು.

ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ ಕಾರ್ಯಕ್ರಮದ ಮೂರನೆ ದಿನದಲ್ಲಿ ಅಕ್ಟೋಬರ್ 6ರಂದು ಮಾನ್ಯ ಶ್ರೀನಿವಾಸ ಪೂಜಾರಿಯವರು ಮನೆಯಲ್ಲಿ ಹೂವಿನಕೋಲು ನೆರವೇರಿಸಿಕೊಂಡು ಮಾತನ್ನಾಡಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಪ್ರಸಾದ ಬಿಲ್ಲವ, ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ತಂಡದ ಸದಸ್ಯರು, ಕಲಾವಿದರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!