spot_img
Friday, April 25, 2025
spot_img

ಕೋಟ : ನವ ವಿವಾಹಿತೆ ಧಾರುಣ ಹತ್ಯೆ : ಪತಿಯಿಂದಲೇ ಹತ್ಯೆ ಶಂಕೆ, ಆರೋಪಿ ಬಂಧನ

ಜನಪ್ರತಿನಿಧಿ (ಕೋಟ) : ನವ ವಿವಾಹಿತೆಯನ್ನು ಧಾರುಣವಾಗಿ ಹತ್ಯೆಗೈದಿರುವ ಘಟನೆ ಸಾಲಿಗ್ರಾಮದ ಕಾರ್ಕಡ ಬಳಿ ಇಂದು (ಶುಕ್ರವಾರ) ಬೆಳಗಿನ ಜಾವ ನಡೆದಿದೆ.

ಕೇವಲ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ಸಾಲಿಗ್ರಾಮದ  ಗುಂಡ್ಮಿ ಗ್ರಾಮದ ಕಿರಣ್‌ ಉಪಾಧ್ಯ ಎಂಬವರೊಂದಿಗೆ ಕೊಪ್ಪಳದ ನಿವಾಸಿ ಜಯಶ್ರೀ ಎಂನವವರ ವಿವಾಹವಾಗಿತ್ತು. ವಿವಾಹದ ಬಳಿ ಕಾರ್ಕಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಸಾಂಸಾರಿಕ ಕಲಹದಿಂದಲೇ ಪತಿ ಕಿರಣ್‌ ಉಪಾಧ್ಯ ಎಂಬವರೇ ಈ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಕೋಟ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!