spot_img
Friday, May 23, 2025
spot_img

ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಮಳೆ ಹಬ್ಬ ಸಂಭ್ರಮ

ಕುಂದಾಪುರ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಹಸಿರು ಹಬ್ಬವನ್ನು ಆಚರಿಸಲಾಯಿತು. ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮೃದ್ಧಿಯ ದ್ಯೋತಕವಾಗಿರುವ ಹಸಿರು ವರ್ಣದ ಉಡುಗೆಯಲ್ಲಿ ನೃತ್ಯ ಮುಖೇನ ಮುಂಗಾರುವಿನ ಸಂಭ್ರಮ ತಿಳಿಸುವುದರೊಂದಿಗೆ, ಕಾಗದದ ದೋಣಿಯಾಟವನ್ನು ಆಡಿ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಥಮಿಕ ವಿಭಾಗದ ಸಂಯೋಜಕಾರಾದ ರವೀಂದ್ರ ಪೂಜಾರಿಯವರು ಹಸಿರು ಬಣ್ಣದ ಪ್ರಾಮುಖ್ಯತೆಯನ್ನು ಪುಣಾಣಿಗಳಿಗೆ ತಿಳಿಹೇಳಿದರು.

ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪ್ರಮೀಳ ಡಿಸೋಜಾ, ಸಹಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!