Sunday, September 8, 2024

ಯಳಜಿತ್ ಗ್ರಾಮದ ಸಾತೇರಿಗೆ ಶೀಘ್ರ ಕಾಲುಸಂಕ-ಶಾಸಕ ಗುರುರಾಜ ಗಂಟಿಹೊಳೆ

ಬೈಂದೂರು: ಯಳಜಿತ್ ಗ್ರಾಮದ ಸಾತೇರಿಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾದ ಕಾಲುಸಂಕವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಯಾವುದೇ ಕ್ಷಣದಲ್ಲೂ ಅಪಾಯ ತಂದೊಡ್ಡಬಹುದಾದ ಈ ಕಾಲುಸಂಕದ ಬದಲಾಗಿ ಶೀಘ್ರವೇ ಆಧುನಿಕ ಮಾದರಿಯ ಕಾಲುಸಂಕ ನಿರ್ಮಿಸಿಕೊಡುವ ಭರವಸೆ ನೀಡಿದರು.

ಅಪಾಯಕಾರಿ ಕಾಲುಸಂಕದಲ್ಲಿ ನದಿ ದಾಟುವ ಮೂಲಕ ಈ ಭಾಗದಲ್ಲಿ ಜನರು ಎದುರಿಸುತ್ತಿರುವ ಬವಣೆಯನ್ನು ಅರ್ಥ ಮಾಡಿಕೊಂಡರು. ಕೂಡಲೇ ಇಲ್ಲಿ ಕಾಲು ಸಂಕ ನಿರ್ಮಾಣ ಮಾಡಿಕೊಡುವುದಾಗಿ ಜನರಿಗೆ ಧೈರ್ಯ ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!