Sunday, September 8, 2024

ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷ ಗುಜ್ಜಾಡಿ ಮಂಜು ನಾಯ್ಕ್ ನಿಧನ

ಕುಂದಾಪುರ: ಹಿರಿಯ ಸಾಮಾಜಿಕ, ರಾಜಕೀಯ ಧುರೀಣ ತ್ರಾಸಿ ನಿವಾಸಿ ಮಂಜು ನಾಯ್ಕ್ (94) ಅಲ್ಪಕಾಲದ ಅಸೌಖ್ಯದಿಂದ ತ್ರಾಸಿಯ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು ಹಲವು ದಶಕಗಳ ಕಾಲ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದರು. ಗಂಗೊಳ್ಳಿಯ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ಭೂನ್ಯಾಯ ಮಂಡಳಿಯ ಸದಸ್ಯರಾಗಿ, ಕೆ‌ಎಫ್‌ಡಿಸಿಯ ನಿರ್ದೇಶಕರಾಗಿ, ಮೊಗವೀರ ಮಹಾಜನ ಸೇವಾ ಸಂಘದಲ್ಲಿ 8 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಾಮಾಣಿಕತೆ, ಕರ್ತವ್ಯಶೀಲತೆ ಹಾಗೂ ಜನಸೇವೆ ಮೂಲಕ ಜನಾನುರಾಗಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!