Sunday, September 8, 2024

ಪದವೀಧರ ಮತದಾರರ ಪಟ್ಟಿ ತೆರೆದು ನೇೂಡಿದಾಗ ಮನಸ್ಸಿಗೆ ನಾಟಿದ್ದಿಷ್ಟು !

ನೈರುತ್ಯ ಪದವಿಧರರ ಪಟ್ಟಿಯ ಕಡೆಗೆ ಒಮ್ಮೆ ಕಣ್ಣು ಹಾಯಿಸಬೇಕೆಂಬ ಮನಸ್ಸಿನಿಂದ ಮತದಾರರ ಪಟ್ಟಿಯ ಒಂದೊಂದೇ ಪುಟಗಳನ್ನು ತೆರೆದು ನೇೂಡುತ್ತಾ ಹೇೂದೆ. ಪದವಿಧರರ ಹೆಸರು, ಪ್ರಾಯ, ಉದ್ಯೋಗ, ವಿಳಾಸಗಳೆಲ್ಲವೂ ನನ್ನನ್ನು ಹೊಸದೊಂದು ಲೇೂಕದ ಕಡೆಗೆ ಕೊಂಡ್ಯೇೂಯುತ್ತಿದೆ ಅನ್ನುವ ಅನುಭವವಾಗಲು ಶುರುವಾಯಿತು.

>ಹರಿದು ಹಂಚಿಹೇೂಗಿರುವ ಪದವಿಧರರ ಮತದಾರರನ್ನು ಗುರುತಿಸುವುದೆಂದರೆ ಸಮುದ್ರದಲ್ಲಿ ಗಾಳ ಹಾಕಿ ನಮಗೆ ಯಾವ ಜಾತಿ ಮೀನು ಬೇಕೊ ಅದನ್ನು ಮಾತ್ರ ಹಿಡಿಯುವ ಸಾಹಸಕ್ಕೆ ಕೈ ಹಾಕಿದ ಅನುಭವ. ಆದರೆ ಸಾರ್ವತ್ರಿಕ ಚುನಾವಣಾ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಹುಡುಕುವುದು ಸುಲಭ ಸಮುದ್ರಕ್ಕೆ ಬಲೆ ಹಾಕಿ ಮೀನು ಹಿಡಿದ ಹಾಗೆ. ಅಲ್ಲಿ ಎಲ್ಲಾ ಜಾತಿಯ ಮೀನುಗಳು ನಮ್ಮ ಬುಟ್ಟಿಗೆ ಅನಿವಾರ್ಯ. ಆದರೆ ಇಲ್ಲಿ ಹಾಗಲ್ಲ, ಕೇವಲ ಪದವಿಧರ ಮೀನುಗಳು ಬುಟ್ಟಿಗೆ ಹಾಕಿ ಕೊಳ್ಳಬೇಕು.

ಸಮಗ್ರ ಪದವಿಧರರ ಪಟ್ಟಿಯ ಮೇಲೆ ಕಣ್ಣು ಹಾಯಿಸಿದಾಗ ಕಂಡು ಬಂದ ಇನ್ನೊಂದಿಷ್ಟು ಗಮನ ಸೆಳೆದ ಅಂಶವೆಂದರೆ ಈ ಪದವಿಧರರಲ್ಲಿ ಕೆಲವೊಂದಿಷ್ಟು ಸರಕಾರಿ ಕೆಲಸ ಇನ್ನೊಂದಿಷ್ಟು ಶಿಕ್ಷಕರು ಕಾಲೇಜಿನ ಉಪನ್ಯಾಸಕರು ಹಾಗೆ ಇನ್ನೊಂದಿಷ್ಟು ಮಂದಿ ಖಾಸಗಿ ಸಂಸ್ಥೆಯಲ್ಲಿ ದುಡಿಯುವವರು ಬೆರಳೆಣಿಕೆಯಷ್ಟು ವೈದ್ಯರು ಇಂಜಿನಿಯರ್ಸ ಅದೇಷ್ಟೋ ಮಂದಿ ಸಣ್ಣಪುಟ್ಟ  ಸ್ವ ಉದ್ಯೋಗ, ಇದರ ನಡುವೆ ಕೃಷಿಯಲ್ಲಿ ಬದುಕನ್ನು ಕಟ್ಟಿ ಕೊಂಡವರು ಇದ್ದಾರೆ. ಅದೆಷ್ಟೊ ಮಂದಿ ಮಹಿಳೆಯರು  ಗೃಹಿಣಿಯರಾಗಿ ಮನೆ, ವಾರ್ತೆ ನೇೂಡಿಕೊಳ್ಳುವವರು ನೇೂಡಿದ್ದೇನೆ. ಈ ಮಧ್ಯದಲ್ಲಿ ನನ್ನ ಮನಸ್ಸಿಗೆ ಬಹುವಾಗಿ ನಾಟಿದ ಒಂದು ಅಂಶವೆಂದರೆ  ಈ ಪದವಿಧರರ ಪಟ್ಟಿಯಲ್ಲಿ ಒಬ್ಬರು ಸ್ನಾತಕೋತ್ತರ ಪದವಿ ಪಡೆದು ದಿನಕೂಲಿಯಾಗಿ ದುಡಿಯುವರ ಪರಿಚಯವೂ ಆಯಿತು. ಈ ಎಲ್ಲಾ ವೈವಿಧ್ಯಮಯವಾದ ಸುಖ ಕಷ್ಟಗಳ ನಡುವೆ ಪದವಿಧರರೆಂಬ ಪ್ರಬುದ್ಧ ಮತದಾರರ ತನ್ನ ಸುಖ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬಲ್ಲ. ವಿಧಾನಪರಿಷತ್ ಜನಪ್ರತಿನಿಧಿ ಯಾರಾಗಬಹುದೆಂಬ ಹುಡುಕಾಟದಲ್ಲಿರುವುದಂತು ಸತ್ಯ.

> ಇಡಿ ಮತದಾರರ ಪಟ್ಟಿಯನ್ನು ಅತ್ಯಂತ ಪ್ರೀತಿಯಿಂದ ತೆರೆದು ನೇೂಡಿದಾದ ಅರವತ್ತು ವರುಷಗಳ ಮೇಲಿನ ಪದವಿಧರರು ತುಂಬಾ ತುಂಬಾ ಕಡಿಮೆ ಸಂಖ್ಯೆಯಲ್ಲಿ  ಇದ್ದಾರೆ. ಹಾಗಾದರೆ ಈ ಅರವತ್ತು ದಾಟಿದ ಪದವಿಧರ ಮತದಾರರು ಯಾವಾಗ ಎಲ್ಲಿ ಮೂಲೆ ಸೇರಿಕೊಂಡರು. ಕೇವಲ ಬಿಸಿ ರಕ್ತದ ಯುವ ಮತದಾರರ ವಯಸ್ಸೆ ಹೆಚ್ಚಿನ ಕಡೆ ಗಮನ ಸೆಳೆಯುತ್ತಿದೆ. ತಕ್ಷಣವೇ ನನಗೆ ನೆನಪಾಯಿತು ಇದು ಚುನಾವಣಾ ಆಯೇೂಗ ಮಾಡಿದ ಮಹಾ ಪ್ರಾರಬ್ದ. ಪ್ರತಿ ಐದು ವರುಷದ ಚುನಾವಣೆಗಾಗಿ ಪ್ರತಿಬಾರಿ ಹೆಸರು ಮರು ನೊಂದಾಯಿಸಿ ಕೊಳ್ಳಬೇಕು ಎನ್ನುವ ಅವೈಜ್ಞಾನಿಕ ನಿಯಮದಿಂದಾಗಿ ಅದೇಷ್ಟೊ ಮಂದಿ ಈ ಚುನಾವಣೆಯಲ್ಲಿ ನಿರಾಸಕ್ತಿ ಹೊಂದಿರ ಬೇಕು ಅನ್ನುವುದು ಖಾತ್ರಿಯಾಯಿತು.

>ಈ ಎಲ್ಲದರ ನಡುವೆ ನೈರುತ್ಯ ಪದವಿಧರ ಕ್ಷೇತ್ರದಲ್ಲಿ ಸರಿಯಾಗಿ 2024 ಮತದಾರರ ಪಟ್ಟಿಯಂತೆ 85 ಸಾವಿರದ 95 ಮಂದಿ ಮತದಾರರು ಉಡುಪಿ ದಕ್ಷಿಣ ಕನ್ನಡ ಮಡಿಕೇರಿ ಶಿವಮೊಗ್ಗ ಚಿಕ್ಕಮಗಳೂರು ಒಂದಿಷ್ಟು ದಾವಣಗೆರೆಯ ಭಾಗದಲ್ಲಿ ಹರಿದು ಹಂಚಿ ಹೇೂಗಿದ್ದಾರೆ. ಇವರಿಗೆ ಬಲೆ ಬೀಸುವ ಹಾಗೆ ಇಲ್ಲ. ಗಾಳ ಹಾಕುವ ಪರಿಸ್ಥಿತಿ ಅಭ್ಯರ್ಥಿಗಳು ಇಲ್ಲ. ಪಕ್ಷಗಳು ಇಲ್ಲ ಅನ್ನುವುದು ವಾಸ್ತವಿಕ. ಹಾಗಾಗಿ ಇಂತವರನ್ನು ತಯಾರಿ ಮಾಡಿ ಕಳುಹಿಸಿದ ಶಿಕ್ಷಣ ಸಂಸ್ಥೆಗಳ ದರ್ಶನ ಮಾಡಿ ಪುಣ್ಯ ಕಟ್ಟಿ ಕೊಳ್ಳುವ ಕೆಲಸದಲ್ಲಿ ಅಭ್ಯರ್ಥಿಗಳು  ಮಗ್ನರಾಗಿರುವುದನ್ನು ದಿನ ನಿತ್ಯವೂ ನೇೂಡುತ್ತಿದ್ದೇವೆ. ಇನ್ನೂ ಕೆಲವರು  ಗಣ್ಯಮಾನ್ಯರು ನೇೂಡಿ ಆಶೀರ್ವಾದ ಪಡೆದುಕೊಳ್ಳುವುದರಲ್ಲಿಯೇ ಮಗ್ನರಾಗಿದ್ದಾರೆ. ಆದರೆ ನಿಜವಾದ ಮತದಾರ ದೇವರು ಪವಡಿಸಿರುವುದು ಹಳ್ಳಿಗಳ ಸಣ್ಣಪುಟ್ಟ ಗುಡಿಸಲುಗಳಲ್ಲಿ ಚಿಕ್ಕ ಪುಟ್ಟ ಉದ್ಯೋಗಗಳಲ್ಲಿ. ಆದರೆ ಈ ಎಲ್ಲಾ ದೇವರುಗಳನ್ನು ನೋಡಿ ಮತ ಬಿಕ್ಷೆ ಬೇಡುವುದು ಕಷ್ಟ  ಸಾಧ್ಯವಾದ ಕಾರಣ ವೃೆವಿಧ್ಯಮಯವಾದ ಮಾಧ್ಯಮಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಅಭ್ಯರ್ಥಿಗಳ ಪಾಲಿಗೆ ಬಂದಿದೆ ಅನ್ನುವುದು ಸ್ವಷ್ಟ.

ಆದರೂ ನಮ್ಮದೊಂದು ನಿವೇದನೆ ನಿಮ್ಮನ್ನು ಆಯ್ಕೆ ಮಾಡಿದ ಮೇಲಾದರೂ ನಮ್ಮನ್ನುಮರೆಯ ಬೇಡಿ. ನಿಮ್ಮ ಪಕ್ಷದ ಹಿತಕ್ಕಿಂತ ಪದವಿಧರರ ಬದುಕಿನ ಸುಖ ಕಷ್ಟಗಳು ಮೊದಲ ಆದ್ಯತೆ ಪರಿಗಣಿಸಿ ಕೆಲಸ  ಮಾಡಿ ಅನ್ನುವುದರೊಂದಿಗೆ ಪ್ರತಿಯೊಬ್ಬ ಪದವಿಧರ ಮತದಾರರಾದ ನಾವು ನಮ್ಮ ಮತದಾನದ ಹಕ್ಕನ್ನು ಜೂನ್ 3ರಂದು ತಪ್ಪದೆ ಚಲಾಯಿಸೇೂಣ. “ಮತದಾನದಲ್ಲಿ ಬದುಕಿನ ಹಕ್ಕು ಅಡಗಿದೆ ಅನ್ನುವುದನ್ನು ಮರೆಯಬಾರದು.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!