spot_img
Tuesday, February 18, 2025
spot_img

ಕಕ್ಕುಂಜೆ : ಯಕ್ಷಗಾನ ಕಲಾವಿದರಾದ ತೊಂಬಟ್ಟು ವಿಶ್ವನಾಥ ಆಚಾರ್ಯ, ಉಳ್ಳೂರು ಶಂಕರ ನಾಯ್ಕ ಅವರಿಗೆ ಸನ್ಮಾನ

ಹಾಲಾಡಿ: ಕಕ್ಕುಂಜೆ ಗ್ರಾಮದ ಶೇರ್ಡಿ ಕಂಡಿಮಕ್ಕಿ ಕುಟುಂಬಸ್ಥರ ಶ್ರೀ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ಪ್ರಥಮ ವರ್ಷದ ವರ್ಧಂತಿ ಉತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ವೆ.ಬ್ರ. ಕಕ್ಕುಂಜೆ ಶ್ರೀಪತಿ ಭಟ್ಟರ ನೇತೃತ್ವದಲ್ಲಿ ನಡೆಯಿತು. ರಾತ್ರಿ  ಹಾಲಾಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯಕ್ಷ ಮಂದಾರ ಯಕ್ಷಾಭಿಮಾನಿ ಬಳಗ ಹಾಲಾಡಿ ಇವರು ಹಾಲಾಡಿ ಮೇಳದ ಕಲಾವಿದರಾದ ತೊಂಬಟ್ಟು ವಿಶ್ವನಾಥ ಆಚಾರ್ಯ ಮತ್ತು ಉಳ್ಳೂರು ಶಂಕರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಲಾಡಿ ಸರ್ವೋತ್ತಮ ಹೆಗ್ಡೆ, ಹಾಲಾಡಿ ಅಮರನಾಥ ಶೆಟ್ಟಿ, ಹಾಲಾಡಿ ಜ್ಞಾನೇಶ ಶೆಟ್ಟಿ, ಶೇಖರ ಶೆಟ್ಟಿ ವಡ್ಡಮೇಶ್ವರ, ಚಂದ್ರಶೇಖರ ಶೆಟ್ಟಿ ಕಂಡಿಮಕ್ಕಿ ಉಪಸ್ಥಿತರಿದ್ದರು.

ಅಮೃತಾ ಶೆಟ್ಟಿ ಸನ್ಮಾನ ಪತ್ರವನ್ನು ವಾಚಿಸಿದರು. ಯಕ್ಷ ಮಂದಾರದ ಹಾಲಾಡಿ ಸಂತೋಷ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!