spot_img
Monday, June 23, 2025
spot_img

ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೃಡಕಲಶ ಪೂಜೆ: ಸಮಾಲೋಚನಾ ಸಭೆ

ಬ್ರಹ್ಮಾವರ: ಕಜ್ಕೆಯಲ್ಲಿ ಅರೆಮಾದನಹಳ್ಳಿ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡು ಫೆಬ್ರವರಿ 21 ರಂದು ಪ್ರತಿಷ್ಠಾಪನೆಗೊಂಡ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೃಡಕಲಶ ಪೂಜೆಯ ಕುರಿತು ಸೋಮವಾರ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ಜರುಗಿತು.

ಎಪ್ರಿಲ್ 6 ರಂದು ದೃಡಕಲಶ ನಡೆಯಲಿದ್ದು ಈ ಸಂದರ್ಬ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮದ ಬಳಿಕ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಮತ್ತು ಸೇವಾ ಕರ್ತರನ್ನು ಗೌರವಿಸುವುದು ಮತ್ತು ದೇವಸ್ಥಾನದ ಮುಂದಿನ ಹಲವಾರು ಅಭಿವೃದ್ಧಿ ಯೋಜನೆಯ ರೂಪು ರೇಷೆ ಕುರಿತು ಅನೇಕರು ಸಲಹೆ ಸೂಚನೆ ನೀಡಿದರು.

ದೇವಸ್ಥಾನ ನಿರ್ಮಾಣ ಸಮಿತಿಯ ನಾನಾ ಪಧಾಧಿಕಾರಿಗಳಾದ ಎಚ್. ರಾಜೇಶ್ ಆಚಾರ್ಯ ಮಠದಬೆಟ್ಟು ಹೆಬ್ರಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಕಜ್ಕೆ , ಶ್ರೀಧರ ಕಾಮತ್, ಕಾಶೀನಾಥ ಶೆಣೈ, ಖಜಾನೆ ಸುಕುಮಾರ್ ಆಚಾರ್ಯ ಮುನಿಯಾಲು ,ರತ್ನಾಕರ ಆಚಾರ್ಯ ಶಿವಪುರ ,ಕೇಶವ ಆಚಾರ್ಯ ಮುದ್ರಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಜೇಶ್ ಆಚಾರ್ಯ ಸಾಂತ್ಯಾರು ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!