Sunday, September 8, 2024

ಮೇಲ್ಮನೆ ಅಧಿವೇಶನದ ಉಳಿದ ಅವಧಿಗೆ ಡೆರೆಕ್ ಒ’ಬ್ರಿಯಾನ್ ಅಮಾನತು : ಸಂಸತ್‌ ಭದ್ರತಾ ಲೋಪ ವಿಚಾರದ ಚರ್ಚೆಯ ವೇಳೆ ಡೆರೆಕ್ ʼದುರ್ನಡತೆʼಗೆ ಕೆರಳಿದ ಸಭಾಪತಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಲೋಕಸಭೆಯ ಸಂಸತ್‌ ಕಲಾಪದ ವೇಳೆ ಭದ್ರತಾ ಲೋಪ ಆಗಿರುವ ಘಟನೆಗೆ ಸಂಬಂಧಿಸಿದಂತೆ  ಸದನದ ಸಭಾಪತಿ ವಿರುದ್ಧ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಇಂದು(ಗುರುವಾರ) ರಾಜ್ಯಸಭೆ ಕಲಾಪ ಆರಂಭವಾದ ಸುಮಾರು ಒಂದು ಗಂಟೆಯ ನಂತರ, ಪ್ರತಿಪಕ್ಷ ಸಂಸದರು ಸಂಸತ್ತಿನ ಭದ್ರತಾ ಲೋಪದ ಕುರಿತು ಚರ್ಚೆಗೆ ಒತ್ತಾಯಿಸಿ ಸದನದ ಬಾವಿಗೆ ಇಳಿದ ಘಟನೆ ನಡೆಯಿತು. ಪ್ರತಿಪಕ್ಷದ ಸಂಸದರು ಭದ್ರತಾ ಉಲ್ಲಂಘನೆಯ ಕುರಿತು ಚರ್ಚಿಸಲು ಕೋರಿ 28 ನೋಟಿಸ್‌ಗಳನ್ನು ಸಲ್ಲಿಸಿದರು.

ಸಭಾಪತಿ ಜಗದೀಪ್ ಧನ್ಖರ್ ಅವರು ನೋಟಿಸ್‌ಗೆ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ಇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಘಟನೆಯೂ ನಡೆಯಿತು. ಸಂಸದರ ಅಶಿಸ್ತಿನ ವರ್ತನೆಯನ್ನು ಖಂಡಿಸಿದ ಧಂಖರ್, ಇದು  ಸದನದ ಶಿಸ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಈ ಹಂತದಲ್ಲಿ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರು ಸಭಾಪತಿಗಳ ಎದುರು ಬಂದು ಬಲವಾಗಿ ಸಂಸತ್‌ ಭದ್ರತಾ ಲೋಪದ ವಿಚಾರಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದರ ಬೆನ್ನಿಗೆ ಕೆರಳಿದ ಧನ್ಖರ್ ಅವರು ಓ’ಬ್ರಿಯಾನ್ ಅವರನ್ನು ಹೆಸರಿಸಿ ಸದನದಿಂದ ಹೊರಹೋಗಬೇಕು ಎಂದು ಆದೇಶಿಸಿದರು. ದಿನದ ಕಲಾಪದಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಹೇಳಿದರು.

ಧನ್ಖರ್ ಅವರು ಡೆರೆಕ್ ಒ’ಬ್ರಿಯಾನ್ ಅವರ ನಡವಳಿಕೆಯನ್ನು ಸಭಾಪತಿಗಳ ವಿರುದ್ಧದ ಅನುಚಿತ ವರ್ತನೆ ಮತ್ತು “ಗಂಭೀರ ದುರ್ನಡತೆ” ಎಂದು ಉಲ್ಲೇಖಿಸಿದರು. ತರುವಾಯ, ಮೇಲ್ಮನೆಯು ಓ’ಬ್ರಿಯನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಅಂಗೀಕರಿಸಿತು.

ನಿನ್ನೆ(ಬುಧವಾರ) ಸಂಸತ್‌ ಕಲಾಪದ ಶೂನ್ಯ ವೇಳೆಯ ಸಂದರ್ಭದಲ್ಲಿ ಪಬ್ಲಿಕ್‌ ಗ್ಯಾಲರಿಯಿಂದ ಜಿಗಿದು ಹಳದಿ ಬಣ್ಣದ ಗ್ಯಾಸ್‌ ಸಿಡಿಸಿದ ಘಟನೆ ನಡೆದಿತ್ತು, ವಿರೋಧ ಪಕ್ಷಗಳು ಸಂಸತ್‌ ನಲ್ಲಿ ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!