Sunday, September 8, 2024

ರಾಜ್ಯದ 25 ಸಂಸದರು ಸೀಡ್ ಲೆಸ್ ಕಡಲೆಕಾಯಿಯಂತೆ… : ಕಾಂಗ್ರೆಸ್‌ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ ( ಬೆಂಗಳೂರು) : ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ನಮ್ಮ ಸರ್ಕಾರ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ನಿಂತಿದೆ.

ಒಂದು ವಾರದೊಳಗೆ ಮೊದಲ ಕಂತಿನ ₹2000 ಮೊತ್ತದ ಬರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತರೂಢ ಕಾಂಗ್ರೆಸ್‌ ತಿಳಿಸಿದೆ.

ಕೇಂದ್ರ ತಂಡ ಬರ ಅಧ್ಯಯನ ನಡೆಸಿ ಹಲವು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಪರಿಹಾರ ನೀಡಲು ಮುಂದಾಗುತ್ತಿಲ್ಲ, ಕರ್ನಾಟಕದ 25 ಬಿಜೆಪಿ ಸಂಸದರೆಂದರೆ ಇದ್ದೂ ಇಲ್ಲದಂತಿರುವ ಸೀಡ್ ಲೆಸ್ ಕಡಲೆಕಾಯಿಯಂತೆ! ಅವರಿಂದ ಯಾವ ಪ್ರಯೋಜನವನ್ನೂ ನಿರೀಕ್ಷಿಸುವಂತಿಲ್ಲ ಎಂದು ಬಿಜೆಪಿ ಹಾಗೂ ರಾಜ್ಯದ 25 ಸಂಸದರನ್ನು ಟೀಕೆ ಮಾಡಿದೆ.    

ಇನ್ನು, ನಿನ್ನೆ(ಸೋಮವಾರ)  ರಾಜ್ಯದ ರೈತರಿಗೆ ಈ ವಾರವೇ ನಗದು ನೇರ ವರ್ಗಾವಣೇ  ಮೂಲಕ ಬರ ಪರಿಹಾರ ಪಾವತಿಸಲಾಗುವುದು. ಇದಕ್ಕೆ ಬಳ್ಳಕೆರೆ ತಾಲೂಕಿನಲ್ಲಿ ಚಾಲಣೇ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!