Sunday, September 8, 2024

ಸಿದ್ಧಾಪುರದಲ್ಲಿ ಶಾರದಾ ನರ್ಸರಿ ಉದ್ಘಾಟನೆ

ಸಿದ್ಧಾಪುರ: ಸಿದ್ದಾಪುರದ ಕಾರಿಮಕ್ಕಿಯಲ್ಲಿ ಗಿರೀಶ್ ಪೂಜಾರಿ ಮಾಲೀಕತ್ವದ ನೂತನ ಶಾರದಾ ನರ್ಸರಿ ಇತ್ತೀಚೆಗೆ ಶುಭಾರಂಭಗೊಂಡಿತು.

ಅರಣ್ಯ ಇಲಾಖೆಯ ನಿವೃತ್ತ ಫಾರೆಸ್ಟರ್ ನಾಗಪ್ಪ ಶೆಟ್ಟಿ ಶಾರದಾ ನರ್ಸರಿಯನ್ನು ಉದ್ಘಾಟಿಸಿ ಕಾಲಘಟ್ಟದ ಕೃಷಿಯಲ್ಲಿ ಖುಷಿಯ ಬದುಕನ್ನು ಕಾಣಲು ಸಾಧ್ಯವಿದೆ ಎಂದರು.

ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್ ಶುಭಾರಂಭಗೊಂಡ ನರ್ಸರಿಯ ಫಲಪುಷ್ಪ ಗಿಡಗಳನ್ನು ಪರಿಸರ ಪ್ರೇಮಿಗಳಿಗೆ ವಿತರಿಸಿ ಗಿಡ ಮರಗಳನ್ನು ಬೆಳೆಸಿದಲ್ಲಿ ಶುದ್ಧ ಗಾಳಿ ಪಡೆಯುವ ಪರಿಸರವಾಗುತ್ತದೆ ನರ್ಸರಿಯ ಕಾಯಕದಿಂದ ಆರೋಗ್ಯ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಜತೆಗೆ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗುತ್ತದೆ ಎಂದರು.

ವಿಶ್ರಾಂತ ಉಪನ್ಯಾಸಕ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ, ಭಾರತೀಯ ಕಿಸಾನ್ ಸಂಘದ ಸಿದ್ದಾಪುರ ಘಟಕ ಅಧ್ಯಕ್ಷ ಭೋಜರಾಜ್ ಶೆಟ್ಟಿ ಗೆದ್ದೋಡ್, ಉದ್ಯಮಿ ಶ್ರೀಕಾಂತ ನಾಯಕ್ ಸಿದ್ದಾಪುರ, ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಜೋಯಿಸ್, ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ನೂತನವಾಗಿ ಶುಭಾರಂಭಗೊಂಡ ನರ್ಸರಿ ಯಶಸ್ಸು ಕೋರಿ ಶುಭ ಹಾರೈಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!