Sunday, September 8, 2024

ಶಾಲೆಗೆ ಹೊರಟಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಸಾವು: ಪುತ್ರಿಯ ಸಾವಿನ ನೋವು ಆರುವ ಮುನ್ನ ಅಗಲಿದ ಪುತ್ರ

ಕುಂದಾಪುರ: ಶಾಲೆಗೆ ಹೊರಟು ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿ ಪ್ರಥ್ವಿರಾಜ್ ಶೆಟ್ಟಿ (13ವ) ಅಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಎಂಬಲ್ಲಿ ಅ.21ರಂದು ನಡೆದಿದೆ.

ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪ್ರಥ್ವಿರಾಜ್ ಶೆಟ್ಟಿ ಎಂದಿನಂತೆ ಶಾಲೆಗೆ ಉತ್ಸಾಹದಿಂದಲೇ ಹೊರಟಿದ್ದು ಇದ್ದಿಕ್ಕಿದ್ದಂತೆ ಕುಸಿದು ಬಿದ್ದಿದ್ದು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿಲಾಯಿತಾದರೂ ಬಾಲಕನನ್ನು ಪರೀಕ್ಷಿಸಿದ ವೈದ್ಯರ ಮೃತ ಪಟ್ಟಿರುವಿದಾಗಿ ತಿಳಿಸಿದರು.

ಮೃತ ಬಾಲಕ ಪ್ರಥ್ವಿರಾಜ ಶೆಟ್ಟಿ ಶಿಕ್ಷಣ ಇಲಾಖೆಯ ಅಧಿಕಾರಿ ಅರುಣ್ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲೆಯ ಶಿಕ್ಷಕಿ ಭಾರತಿ ದಂಪತಿಯ ಪುತ್ರ.

ಪೃಥ್ವಿರಾಜ್ ಶೆಟ್ಟಿ ಹುಟ್ಟುಹಬ್ಬ ಅ.20ರಂದು ನಡೆದಿತ್ತು. ಹುಟ್ಟುಹಬ್ಬದ ಮುರುದಿನವೇ ಈ ದುರಂತ ನಡೆದಿದೆ. ಅನಾರೋಗ್ಯದ ಯಾವುದೇ ಸುಳಿವು ಕೂಡಾ ಸಿಕ್ಕಿರಲಿಲ್ಲ. ಹೃದಯಘಾತವಾಗಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ 27ರಂದು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಪೃಥ್ವಿರಾಜ್ ಶೆಟ್ಟಿಯ ಸೋದರಿ ಅನುಶ್ರೀ (14ವ) ಅ.27-2022ರಂದು ಇದೇ ರೀತಿ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಒಂದು ವರ್ಷದೊಳಗೆ ಇಬ್ಬರು ಮಕ್ಕಳನ್ನು ಈ ಕುಟುಂಬ ಕಳೆದುಕೊಂಡಿದೆ. ಪುತ್ರಿಯ ಸಾವಿನ ಶೋಕ ಆರುವ ಮುನ್ನವೇ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!