Sunday, September 8, 2024

ಜೇಸಿ ಸಪ್ತಾಹ : ಡಾ. ಸತೀಶ್ ಪೂಜಾರಿ ಅವರಿಗೆ ʼಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿʼ ನೀಡಿ ಗೌರವ

ಕುಂದಾಪುರ (ಜನಪ್ರತಿನಿಧಿ ವಾರ್ತೆ) :  ಜೇಸಿಐ ಕುಂದಾಪುರ ಸಿಟಿʼಯ ಆಶ್ರಯದಲ್ಲಿ ಸೆಪ್ಟೆಂಬರ್ 9 ರಿಂದ 15 ರವರೆಗೆ ಕುಂದಾಪುರದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ನಡೆದ ʼಜೇಸಿ ಸಪ್ತಾಹʼ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ಪೂಜಾರಿ ಅವರನ್ನು ʼಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ‘ಜೇಸಿಐ ಕುಂದಾಪುರ ಸಿಟಿ’ಯ ಅಧ್ಯಕ್ಷೆ ಡಾ ಸೋನಿ ವಹಿಸಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ಮಾತಾ ಆಸ್ಪತ್ರೆಯ ನಿರ್ದೇಶಕ ಡಾ. ಪ್ರಕಾಶ್ ತೊಳಾರ್, ವೈದ್ಯಾಧಿಕಾರಿ ಹಾಗೂ ರೋಟರಿ ಉಪ ರಾಜ್ಯಪಾಲರದ ಡಾ. ಸಂದೀಪ್ ಶೆಟ್ಟಿ, ವಲಯ 15 ರ ಪೂರ್ವ ವಲಯಾಧಿಕಾರಿ ಅಬ್ದುಲ್ ಜಬ್ಬಾರ್ ಸಾಹೇಬ್, ಯೋಗ ಗುರು ಸಂಜೀವಣ್ಣ,  ಡಾ. ದೀಕ್ಷಿತಾ ಪಟೇಲ್, ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ನಾಗೇಶ ನಾವಡ, ವಿಜಯ್ ಭಂಡಾರಿ,  ಶ್ರೀಧರ್ ಸುವರ್ಣ, ಚಂದ್ರಕಾಂತ್,  ಗಿರೀಶ್ ಹೆಬ್ಬಾರ್, ಪ್ರಶಾಂತ್ ಹವಾಲ್ದಾರ್, ನಿಕಟಪೂರ್ವ ಅಧ್ಯಕ್ಷ ಅಭಿಲಾಶ್, ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಡಿ ಕೋನ್ಹ, ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!