Sunday, September 8, 2024

ಅಂತರಾಷ್ಟ್ರೀಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್: ಲಕ್ಷ್ ರಾಜೇಶ್ ಗೆ ಬಂಗಾರದ ಪದಕ


kundapur: ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 30ರಂದು ಜರುಗಿದ 28ನೇ ಐಡಿಯಲ್ ಪ್ಲೇ ಅಭಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ World City Cup-2023 ನಲ್ಲಿ ಕರ್ನಾಟಕ ರಾಜ್ಯದ ಕುಂದಾಪುರ ಅಭಾಕಸ್ ಸೆಂಟರ್ ವತಿಯಿಂದ ಪ್ರತಿನಿಧಿಸಿದ 10 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಬಂಗಾರದ ಪದಕ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನ ಬಗ್ವಾಡಿ ಹೋಬಳಿ ವ್ಯಾಪ್ತಿಯ ಅರಾಟೆ ನಿವಾಸಿ ರೇಷ್ಮಾ ಮತ್ತು ರಾಜೇಶ್ ದಂಪತಿ ಪುತ್ರ ಲಕ್ಷ್ ರಾಜೇಶ್ ಬಂಗಾರದ ಪದಕ ಪಡೆದಿದ್ದಾರೆ.

ಮಹಾಲಕ್ಷ್ಮೀ ಮತ್ತು ಪ್ರಸನ್ನ ಕೆ.ಬಿ ದಂಪತಿ ಪುತ್ರಿ ಪರ್ವದಿ ಹಾಗೂ ಜ್ಯೋತಿ ಎನ್.ಕಾಂಚನ್ ಮತ್ತು ನಾಗರಾಜ್ ಕಾಂಚನ್ ಪುತ್ರಿ ಆದ್ಯ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. 19 ವಿವಿಧ ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!