Sunday, September 8, 2024

ಕುದ್ರುಬೀಡು: ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ

ಕುಂದಾಪುರ: ಆರ್ಡಿ ಸಮೀಪದ ಕುದ್ರುಬೀಡು-ಕೊಳ್ಕೆಬೈಲು ಶ್ರೀ‌ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಪರಿವಾರ ಶ್ರೀ‌ಉಮಾಮಹೇಶ್ವರ ದೇವರ ವಾರ್ಷಿಕ ಪ್ರತಿಷ್ಠಾ_ವರ್ಧಂತಿ ಮಹೋತ್ಸವದ ಪ್ರಯುಕ್ತ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ,ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ರಂಗ ವೇದಿಕೆಯಲ್ಲಿ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ದೇವಳದ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.

ದೇವಳದ ಗೌರವಾಧ್ಯಕ್ಷ ಕೆರ್ಜಾಡಿ ದೊಡ್ಮನೆ ದಯಾನಂದ ರಾಮಣ್ಣ ಶೆಟ್ಟಿ, ಅಧ್ಯಕ್ಷ ಎ.ರತ್ನಾಕರ ಶೆಟ್ಟಿ, ಕಾರ್ಯಾಧ್ಯಕ್ಷ ಸೀತಾರಾಮ ಹೆಗ್ಡೆ ಕೆರ್ಜಾಡಿ, ಎಂ.ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ವಿಜಯ ಹೆಗ್ಡೆ ಕಳತ್ತೂರು, ಅರ್ಚಕ ಮಹಾಬಲೇಶ್ವರ ಭಟ್, ಗಣೇಶ್ ಅರಸಮ್ಮಕಾನು,ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ಭಜನಾ ಮಂಡಳಿ ಸಂಚಾಲಕ ಭುಜಂಗ ಶೆಟ್ಟಿ ಬೆಪ್ಡೆ, ಕಾರ್ಯದರ್ಶಿ ಗೋಪಾಲ ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!