Sunday, September 8, 2024

ಮೂಡ್ಲಕಟ್ಟೆ : ಸಂಸ್ಥಾಪಕರ ದಿನಾಚರಣೆಯ ವಿಶೇಷ ಉಪನ್ಯಾಸ

ಕುಂದಾಪುರ: ಮೂಡ್ಲಕಟ್ಟೆ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಏಪ್ರಿಲ್ ೮ರಂದು ಸಂಸ್ಥೆಯಲ್ಲಿ ಮಾಜಿ ಇಸ್ರೋ ವಿಜ್ಞಾನಿ ಡಾ. ಕೆ. ಗಣೇಶ ರಾಜ್‌ರವರಿಂದ ಐ.ಎಂ.ಜಯರಾಮ ಶೆಟ್ಟಿ ಸ್ಮರಣಾರ್ಥ ವಿಶೇಷ ಉಪನ್ಯಾಸ ನಡೆಯಿತು.

ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಅವರು, ಜಗತ್ತಿನ ವಿವಿಧೆಡೆ ನಡೆದ ದೊಡ್ಡ ಭೂಕಂಪಗಳು ಹಾಗೂ ಅವುಗಳಿಂದ ಸಮಾಜದ ಮೇಲೆ ಆದ ನಷ್ಟ ಮತ್ತು ದುಷ್ಪರಿಣಾಮಗಳನ್ನು ಅತ್ಯಂತ ವಿವರವಾಗಿ ತಿಳಿಸಿದರು.

ಪ್ರಾಕೃತಿಕವಾಗಿ ನಡೆಯುವ ಭೂಕಂಪನವನ್ನು ತಡೆಯಲಾಗದಿದ್ದರೂ ಅದರಿಂದ ಆಗುವ ಪರಿಣಾಮಗಳ ತೀವ್ರತೆಯನ್ನು, ಕಟ್ಟಡಗಳನ್ನು ಸರಿಯಾಗಿ ಕಟ್ಟುವುದರ ಮೂಲಕ ಕಡಿಮೆಗೊಳಿಸಲು ಸಾಧ್ಯ ಎಂದು ಹೇಳಿದರು. ಈ ದಿಸೆಯಲ್ಲಿ ಜಪಾನ್ ದೇಶದ ಮಾದರಿ ಅನುಕರಣೀಯ ಎಂದರು.

ನಮ್ಮ ಕರಾವಳಿಯು ಸುರಕ್ಷಿತ ವಲಯದಲ್ಲಿರುವುದರಿಂದ ತುಂಬಾ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರಲ್ಲದೇ ಕಟ್ಟಡ ನಿರ್ಮಾಣ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳವುದು ಒಳ್ಳೆಯದು ಎಂದರು. ಗ್ರಾಮೀಣ ಕ್ಷೇತ್ರದಲ್ಲಿ ಸಂಸ್ಥೆ ಸ್ಥಾಪಿಸಿ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಐ.ಎಂ.ಜಯರಾಮ ಶೆಟ್ಟಿಯವರು ವಿದ್ಯಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಹಾಗೂ ಅವರ ಪುತ್ರ ಸಿದ್ಧಾರ್ಥ ಜೆ. ಶೆಟ್ಟಿಯವರು ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿರುವ ಪರಿಯನ್ನು ಶ್ಲಾಘಿಸಿದರು.

ಐ.ಎಂ.ಜೆ ಸಂಸ್ಥೆಗಳ ಮುಖ್ಯಸ್ಥರಾದ ಸಿದ್ಧಾರ್ಥ ಜೆ. ಶೆಟ್ಟಿಯವರು, ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್ರವರು, ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂರವರು, ಐ.ಎಂ.ಜೆ ಪ್ರಾಂಶುಪಾಲರಾದ ಡಾ.ಪ್ರತಿಭಾ ಎಂ. ಪಟೇಲ್, ಎಂಸಿ‌ಎನ್ ಪ್ರಾಂಶುಪಾಲರಾದ ಹಾಗೂ ಈ ಕಾರ್ಯಕ್ರಮದ ಸಂಯೋಜಕರಾದ ಜೆನ್ನಿಫರ್ ಮಿನೇಜಸ್, ಸಂಸ್ಥಾಪಕರ ದಿನಾಚರಣೆಯ ವ್ಯವಸ್ಥಾಪಕರಾದ ಹಾಗೂ ಎಂಐಟಿಕೆ ಉಪಪಾಂಶುಪಾಲರಾದ ಪ್ರೋ. ಮೆಲ್ವಿನ್ ಡಿಸೋಜ್‌ರವರು, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆಯವರು, ಸಂಶೋಧಕರಾದ ಡಾ. ಸತ್ಯಜಿತ್, ಸಂಸ್ಥೆಯ ಉಪಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸವರ್ಗ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!