Sunday, September 8, 2024

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ

ಕುಂದಾಪುರ : ಶ್ರೀ ವೆಂಕಟರಮಣ ಪದವಿ  ಪೂರ್ವ  ಕಾಲೇಜಿನಲ್ಲಿ ದಿನಾಂಕ 29.11.22 ರಂದು ವಾರ್ಷಿಕೋತ್ಸವ ಸಮಾರಂಭ ನೆರವೇರಿತು.

  ಸಭಾ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ,  ಶ್ರೀ  ಕಾಳಾವರ  ವರದರಾಜ  ಎಂ.ಶೆಟ್ಟಿ ಸರಕಾರಿ  ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್.ನಾಯಕ್    ಮಾತನಾಡಿ, ವಿದ್ಯಾರ್ಥಿಯು  ತಂದೆ  ತಾಯಿಯ ಕನಸು ನನಸು  ಮಾಡುವ ಶಿಕ್ಷಣ  ಪಡೆದು  ಜವಾಬ್ದಾರಿಯುತ ಸತ್ಪ್ರಜೆ ಯಾಗಿ ಭವ್ಯ  ಭಾರತದ  ನಿರ್ಮಾಣದಲ್ಲಿ ಸಹಕರಿಸಿ  ಎಂದರು.

 ಅತಿಥಿ  ಸ್ಥಾನ ಅಲಂಕರಿಸಿದ ಸಿನಿಮಾ ನಟಿ  ಶ್ರೀಮತಿ  ಪ್ರತಿಮಾ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಂಸ್ಕೃತಿ, ಜವಾಬ್ದಾರಿ, ತಾಳ್ಮೆ, ಅನುಕಂಪ, ಪ್ರೀತಿ,ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಶುಭ  ಹಾರೈಸಿದರು.

 ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ  ಪರೀಕ್ಷೆಯಲ್ಲಿ ರಾಜ್ಯ ಮಟ್ಟದ  rank ಪಡೆದ ವಿದ್ಯಾರ್ಥಿಗಳನ್ನು  ಸಂಸ್ಥೆಯ  ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ  ಆಡಳಿತ ಮಂಡಳಿಯ  ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್  ಅವರು ವಿದ್ಯಾರ್ಥಿಗಳಿಗೆ ಸಾಧನ ಪಥದಲ್ಲಿ ನಾಳಿನ  ಬಗ್ಗೆ  ಕಾಳಜಿ ಇಟ್ಟುಕೊಂಡು ಅನನ್ಯ ಶ್ರದ್ದೆ ಹಾಗೂ ಸತತ ಪ್ರಯತ್ನದಿಂದ  ಶಿಕ್ಷಣ  ಪಡೆದು  ಸಮಾಜದಲ್ಲಿ ಕೀರ್ತಿ ತರುವಂತಹ  ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ  ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ ,  ಆಡಳಿತ ಮಂಡಳಿ ಟ್ರಸ್ಟಿ ಕೆ. ರತ್ನಾಕರ  ಶೆಣೈ ,ಕಾರ್ಪೊರೇಷನ್ ಬ್ಯಾಂಕ್ ನ  ನಿವೃತ್ತ ಜನರಲ್  ಮ್ಯಾನೇಜರ್  ಕೆ. ಗಿರಿಧರ್ ಶೆಣೈ, ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ್ ಶ್ಯಾನುಭೋಗ್ , ರಾಸಾಯನ ಶಾಸ್ತ್ರ ಉಪನ್ಯಾಸಕ ರಮಾಕಾಂತ್  ರೇವಣ್ ಕರ್, ವೆಂಕಟರಮಣ ಸಮೂಹ  ಸಂಸ್ಥೆಗಳ  ಮುಖ್ಯ ಶಿಕ್ಷಕರಾದ  ಕೃಷ್ಣ ಅಡಿಗ ,  ಶ್ರೀಮತಿ ರೇಷ್ಮಾ ಡಿಸೋಜಾ, ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ  ಶ್ರೀಮತಿ ರಾಗಿಣಿಯವರು  ವಾರ್ಷಿಕ  ವರದಿ ವಾಚಿಸಿದರು,  ವಿದ್ಯಾರ್ಥಿಗಳಾದ  ದಾಕ್ಷಾಯಿಣಿ  ಹಾಗೂ ಅದಿತಿ  ಅತಿಥಿಗಳನ್ನು  ಪರಿಚಯಿಸಿದರು, ನೇಹಾ. ಜೆ. ರಾವ್ ಸ್ವಾಗತಿಸಿ, ಪ್ರಿನ್ಸಿ  ಡಿ’ಸಿಲ್ವ ವಂದಿಸಿ, ಪ್ರಣಮ್ಯ  ಕಾರ್ಯಕ್ರಮ ನಿರೂಪಿಸಿದರು.

ಸಭಾ  ಕಾರ್ಯಕ್ರಮದ  ನಂತರ  ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳು   ಜರುಗಿದವು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!