
ಬೈಂದೂರು: ಶ್ರೀಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ (ನಿ) ನಾವುಂದ ಅಧ್ಯಕ್ಷರಾಗಿ ಡಾ. ಎನ್.ಕೆ ಬಿಲ್ಲವ ಪುನರಾಯ್ಕೆಯಾಗಿದ್ದಾರೆ.
2022-2027ನೇ ಸಾಲಿಗೆ ಇತ್ತೀಚೆಗೆ ಜರಗಿದ ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ಎಲ್ಲ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಜೂನ್ 24 ರಂದು ನಡೆದ ನೂತನ ಆಡಳಿತ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾಗಿ ಡಾ. ಎನ್.ಕೆ.ಬಿಲ್ಲವ ಮತ್ತು ಉಪಾಧ್ಯಕ್ಷರಾಗಿ ರಾಜೀವ.ಎಂ.ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಮಂಜು ಪೂಜಾರಿ, ಶೇಖರ.ಎಂ.ಪೂಜಾರಿ, ಸಾವಿತ್ರಿ ಪೂಜಾರಿ, ಸುರೇಶ ಕೆ.ಪೂಜಾರಿ, ಶುಭದಾ.ಎನ್.ಬಿಲ್ಲವ, ಸುಧಾಕರ.ಪಿ.ಪೂಜಾರಿ, ರೇವತಿ ನಾಯ್ಕ್ , ಸುಜನ.ಆರ್.ಬಿಲ್ಲವ, ವೆಂಕಟೇಶ ಗಾಣಿಗ, ಯೋಗೀಶ ಕಾರಂತ ಅವರು ನಿರ್ದೇಶಕರಾಗಿ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಚುನಾವಣಾ ನಿರ್ವಾಚನಾಧಿಕಾರಿಗಳಾಗಿ ಭಾಗವಹಿಸಿದ ಕೆ.ಎಸ್.ಜಗದೀಶ್ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿ ಉಡುಪಿ ಘೋಷಣೆ ಮಾಡಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ತಿಮ್ಮ ಪೂಜಾರಿ ಉಪಸ್ಥಿತರಿದ್ದರು.