Sunday, September 8, 2024

ಜಿಲ್ಲಾಡಳಿತದಿಂದ ರೈತರ ಸಭೆ ನಡೆಸಲು ಆಗ್ರಹ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ರೈತರು ಅನೇಕ ಸಮಸ್ಯೆಗಳಿಂದ ಹೈರಾಣಾಗಿದ್ದು ರೈತರು ತಮ್ಮ ಸಮಸ್ಯೆ, ಆಗ್ರಹ, ಬೇಡಿಕೆಗಳನ್ನು ಸಂಬಂಧಿತರ ಗಮನಕ್ಕೆ ತರಲು ವೇದಿಕೆಯೇ ಇಲ್ಲವಾಗಿದೆ. ಹಿಂದೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅನೇಕ ರೈತರ ಕುಂದುಕೊರತೆಗಳ ಸಭೆ ನಡೆದಿದ್ದು ಈಗ ಕೆಲವು ವರ್ಷಗಳಿಂದ ಇಂತಾ ಸಭೆಗಳು ನಡೆಯುತ್ತಲೇ ಇಲ್ಲ, ಆದುದರಿಂದ ಜಿಲ್ಲಾಡಳಿತ ಕೂಡಲೇ ಕಂದಾಯ, ಕೃಷಿ, ತೋಟಗಾರಿಕೆ, ಇಂಧನ, ಅರಣ್ಯ, ಸಹಕಾರ, ಭಾರೀ ಮತ್ತು ಮಧ್ಯಮ ನೀರಾವರಿ, ಸಣ್ಣ ನೀರಾವರಿ ಮುಂತಾದ ರೈತರಿಗೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಹಾಗೂ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ಸಹಬಾಗಿತ್ವದಲ್ಲಿ ಸಭೆಯನ್ನು ನಡೆಸಬೇಕೆಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!