Sunday, September 8, 2024

ಗುಜ್ಜಾಡಿ ಸ. ಹಿ. ಪ್ರಾ. ಶಾಲೆ: ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ನಾರಾಯಣ ಕೆ.ಗುಜ್ಜಾಡಿ ಆಯ್ಕೆ

ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ರಚನೆ ಸಂಬಂಧ ಪೋಷಕರ ಪರಿಷತ್ತಿನ ಸಭೆ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ನಾರಾಯಣ ಕೆ. ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಪೂಜಾರಿ ಆಯ್ಕೆಯಾದರು. ಸದಸ್ಯರಾಗಿ ಹರೀಶ್ ಮೇಸ್ತ, ರಘುವೀರ ಕೆ., ಮಹೇಶ್ ಆಚಾರ್, ರಮೇಶ್ ಬಿ.ಕೆ., ವಿಶ್ವನಾಥ್ ಮೇಸ್ತ, ತಿಮ್ಮಪ್ಪ ಖಾರ್ವಿ, ಮಹೇಶ್ ಪೂಜಾರಿ, ನಾರಾಯಣ ಆಚಾರ್ಯ, ಕವಿತಾ ಗಾಣಿಗ, ಗಾಯತ್ರಿ ಕೊಡಂಚ, ಶಾಂತಾ, ಸವಿತಾ ಭಂಡಾರಿ, ಶಶಿಕಲಾ, ವೀಣಾ ಖಾರ್ವಿ, ಶಕುಂತಲಾ, ಸಾವಿತ್ರಿ ಸದಸ್ಯರಾಗಿ ಆಯ್ಕೆಯಾದರು.

ಶಾಲಾ ಮುಖ್ಯೋಪಾಧ್ಯಾಯ ಆನಂದ ಜಿ. ಹಾಗೂ ಸಹಶಿಕ್ಷಕರು ನೂತನವಾಗಿ ಆಯ್ಕೆಯಾದ ಎಸ್‌ಡಿ‌ಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!