Sunday, September 8, 2024

ಬೈಂದೂರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾಗಿ ಎಂ. ಗೋವಿಂದ ಪುನರಾಯ್ಕೆ

ಬೈಂದೂರು :ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆ ಬೈಂದೂರಿನ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಪ್ರೌಢಶಾಲಾ ಭಾಷಾ ಶಿಕ್ಷಕ ಗೋವಿಂದ ಬಿಲ್ಲವ ಅವರು ಕನ್ನಡ ಭಾಷೆಯ  ಸೊಬಗು, ಸೊಗಡು , ಪ್ರಾದೇಶಿಕವಾಗಿ ಭಾಷಾವೈವಿಧ್ಯತೆಗಳು,  ಕವಿಗಳು  ಸಾಹಿತ್ಯ ವೈಚಾರಿಕತೆಯೊಂದಿಗೆ ವೈನೋದಿಕವನ್ನೂ ಬಳಸಿ ಕೊಂಡು ಭಾಷೆಯನ್ನು ಬೆಳೆಸುತ್ತಿದ್ದ ರೀತಿಯನ್ನು ಅತ್ಯಂತ ಸುಂದರವಾಗಿ ತಮ್ಮ ಉಪನ್ಯಾಸದ ಮೂಲಕ ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ    ಅಧ್ಯಕ್ಷ ಎಂ. ಗೋವಿಂದ  ಕಾರ್ಯದರ್ಶಿ ಸಂಜೀವ  ಆಚಾರ್, ಉಪಾಧ್ಯಕ್ಷ ಎ. ಶ್ರೀನಿವಾಸ ಅವರನ್ನು ಮುಂದಿನ ಸಾಲಿನ ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.  ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಹೆಚ್. ವಸಂತ ಹೆಗಡೆ ಅವರು ಉಪಸ್ಥಿತರಿದ್ದು ಶುಭಕೋರಿದರು. ನಿವೃತ್ತ  ಶಿಕ್ಷಕ ಭಾಸ್ಕರ್ ಶೆಟ್ಟಿ, ಕೆ. ಪುಂಡಲಿಕ ನಾಯಕ್ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹೆಚ್  ರಾಮ ಸೇರೆಗಾರ ಅವರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!